Vegetable Oils

In this era, when big industry exerts enormous influence over the media, and nutritional and treatment guidelines are issued by professional societies in favor of industry, we seem to have largely lost our way in the promotion of human health. However, despite the pressures from current industrial and socioeconomic structures, many scientists in medical and nutritional fields working in evidence-based research have begun to raise their voices and we join them in unison because the impact of increasing the intake of some vegetable oils on human nutrition seems to be much more severe than what we previously thought. [See]

Okuyama H, Langsjoen PH, Ohara N et al. Medicines and Vegetable Oils as Hidden Causes of Cardiovascular Disease and Diabetes. Pharmacology 2016;98:134-170. https://doi.org/10.1159/000446704. Available at https://www.karger.com/Article/Fulltext/446704

DiNicolantonio JJ, O’Keefe JH. Omega-6 vegetable oils as a driver of coronary heart disease: the oxidized linoleic acid hypothesis. Open Heart. Oct 01, 2018;5(2):e000898. DOI:10.1136/openhrt-2018-000898. URL: http://openheart.bmj.com/content/5/2/e000898.full

Khosla I, Khosla1 GC. Saturated fats and cardiovascular disease risk: A review. J Clin Prev Cardiol [serial online] 2017 [cited 2020 Nov 22];6:56-9. Available from: https://www.jcpconline.org/text.asp?2017/6/2/56/203535

GERD

Several studies have found strong correlation of metabolic syndrome with gastroesophageal reflux disease (GERD)

Wu P, Ma L, Dai GX et al. The association of metabolic syndrome with reflux esophagitis: a case‐control study. Neurogastro Motil. November 2011;23(11):989-994. Available at https://onlinelibrary.wiley.com/doi/abs/10.1111/j.1365-2982.2011.01786.x

Mohammadi M, Ramezani Jolfaie N, Alipour R, Zarrati M. Is Metabolic Syndrome Considered to Be a Risk Factor for Gastroesophageal Reflux Disease (Non-Erosive or Erosive Esophagitis)?: A Systematic Review of the Evidence. Iran Red Crescent Med J. 2016;18(11):e30363. Published 2016 Aug 8. doi:10.5812/ircmj.30363. Available at https://www.ncbi.nlm.nih.gov/pmc/articles/PMC5292393/

Ierardi E, Rosania R, Zotti M, Principe S, Laonigro G, Giorgio F, Francesco V, Panella C. Metabolic syndrome and gastro-esophageal reflux: A link towards a growing interest in developed countries. World J Gastrointest Pathophysiol 2010; 1(3): 91-96. DOI: https://dx.doi.org/10.4291/wjgp.v1.i3.91 URL: https://www.wjgnet.com/2150-5330/full/v1/i3/91.htm

Hirata A, Kishida K, Nakatsuji H. et al. High prevalence of gastroesophageal reflux symptoms in type 2 diabetics with hypoadiponectinemia and metabolic syndrome. Nutr Metab (Lond) 2012;9:4. https://doi.org/10.1186/1743-7075-9-4. Available at https://nutritionandmetabolism.biomedcentral.com/articles/10.1186/1743-7075-9-4

Hsieh YH, Wu MF, Yang PY et al. What is the impact of metabolic syndrome and its components on reflux esophagitis? A cross-sectional study. BMC Gastroenterol 2019;19:33. https://doi.org/10.1186/s12876-019-0950-z. Available at https://bmcgastroenterol.biomedcentral.com/articles/10.1186/s12876-019-0950-z

Nomura M, Tashiro N, Watanabe T et al. Association of Symptoms of Gastroesophageal Reflux with Metabolic Syndrome Parameters in Patients with Endocrine Disease. International Scholarly Research Notices. vol. 2014, Article ID 863206, 6 pages, 2014. https://doi.org/10.1155/2014/863206. Available at https://www.hindawi.com/journals/isrn/2014/863206/

Kallel L, Bibani N, Fekih M et al. Metabolic syndrome is associated with gastroesophageal reflux disease based on a 24-hour ambulatory pH monitoring. Dis Esophagus. 2011 Apr;24(3):153-9. doi: 10.1111/j.1442-2050.2010.01118.x. Available at https://pubmed.ncbi.nlm.nih.gov/20946134/

Niigaki M, Adachi K, Hirakawa K et al. Association between metabolic syndrome and prevalence of gastroesophageal reflux disease in a health screening facility in Japan. J Gastroenterol 2013;48:463–472. https://doi.org/10.1007/s00535-012-0671-3 Available at https://link.springer.com/article/10.1007/s00535-012-0671-3

Punjabi P, Hira A, Prasad S, Wang X, Chokhavatia S. Review of gastroesophageal reflux disease (GERD) in the diabetic patient. J Diab. September 2015;7(5):599-609. https://doi.org/10.1111/1753-0407.12279. Available at https://onlinelibrary.wiley.com/doi/full/10.1111/1753-0407.12279

Chung SJ. Oesophagus Metabolic syndrome and visceral obesity as risk factors for reflux oesophagitis: a cross-sectional case–control study of 7078 Koreans undergoing health check-ups. Gut 2008;57:1360-1365.

Park JH et al. Metabolic syndrome is associated with erosive esophagitis World J Gastroenterol. 2008;14(35):5442–5447. URL: http://www.wjgnet.com/1007-9327/14/5442.pdf

Lee Y-C. The effect of metabolic risk factors on the natural course of gastro-oesophageal reflux disease Gut 2009;58:174-181. URL: http://gut.bmj.com/content/58/2/174.full

Sugar is Bad

Consumption of added sugar is associated with development and/or prevalence of fatty liver, dyslipidemia, insulin resistance, hyperuricemia, cardiovascular disease and type 2 diabetes, and many of these associations are independent of body weight gain or total energy intake. Stanhope KL. Sugar consumption, metabolic disease and obesity: The state of the controversy. Crit Rev Clin Lab Sci. 2016;53(1):52-67. doi:10.3109/10408363.2015.1084990. Available at https://www.ncbi.nlm.nih.gov/pmc/articles/PMC4822166/

We revisit an old hypothesis that sugar,particularly excessive fructose intake, has a critical role in the epidemic of cardiorenal disease. We also present evidence that the unique ability of fructose to induce an increase in uric acid may be a major mechanism by which fructose can cause cardiorenal disease.Finally, we suggest that high intakes of fructose in African Americans may explain their greater predisposition to develop cardiorenal disease. Johnson RJ, Segal MS, Sautin Y. Potential role of sugar (fructose) in the epidemic of hypertension,obesity and the metabolic syndrome, diabetes, kidney disease, and cardiovascular disease. Am J Clin Nutr. 2007;86:899–906. Available at https://watermark.silverchair.com/znu01007000899.pdf

A growing body of evidence suggests that sugars might have various adverse health effects. High intake of sugars may be related with an increased risk of several disorders including dental caries, obesity, cardiovascular disease, diabetes, gout, fatty liver disease, some cancers, components of the metabolic syndrome, and hyperactivity. Heidari-Beni M., Kelishadi R. (2016) The Role of Dietary Sugars and Sweeteners in Metabolic Disorders and Diabetes. In: Merillon JM., Ramawat K. (eds) Sweeteners. Reference Series in Phytochemistry. Springer, Cham. https://doi.org/10.1007/978-3-319-26478-3_31-1. Available at https://link.springer.com/referenceworkentry/10.1007%2F978-3-319-26478-3_31-1

High sugar consumption and sedentary lifestyle are associated with increased obesity prevalence. Siervo, M., Montagnese, C., Mathers, J., Soroka, K., Stephan, B., & Wells, J. (2014). Sugar consumption and global prevalence of obesity and hypertension: An ecological analysis. Public Health Nutrition, 17(3), 587-596. doi:10.1017/S1368980013000141. Available at https://www.cambridge.org/core/journals/public-health-nutrition/article/sugar-consumption-and-global-prevalence-of-obesity-and-hypertension-an-ecological-analysis/59A063A3E178E83F55174800788A397B

Sugar can induce metabolic syndrome in mice independently of its sweet properties. Andres-Hernando A, Kuwabara M, Orlicky DJ et al. Sugar causes obesity and metabolic syndrome in mice independently of sweet taste. American Journal of Physiology-Endocrinology and Metabolism. August 2020;319(2):E276-E290. https://doi.org/10.1152/ajpendo.00529.2019. Available at https://journals.physiology.org/doi/abs/10.1152/ajpendo.00529.2019?journalCode=ajpendo

Epidemiological studies support liquid added sugars, such as soft drinks, as carrying greater risk for development of metabolic syndrome compared with solid sugar. Some studies suggest that fruit juice may also confer relatively higher risk for weight gain and insulin resistance compared with natural fruits. Experimental evidence suggests this may be due to differences in how fructose is metabolized. Fructose induces metabolic disease by reducing the energy levels in liver cells, mediated by the concentration of fructose to which the cells are exposed. The concentration relates to the quantity and speed at which fructose is ingested, absorbed, and metabolized. Although reduced intake of added sugars (sucrose and high-fructose corn syrup) remains a general recommendation, there is evidence that sugary soft drinks may provide greater health risks relative to sugar-containing foods. Available at https://www.practiceupdate.com/content/the-form-of-sugar-intake-and-the-risk-for-metabolic-syndrome/83490

This paper will present evidence for the link between glucose, diabetes, obesity, metabolic syndrome and incident HF. Horwich TB, Fonarow GC. Glucose, obesity, metabolic syndrome, and diabetes relevance to incidence of heart failure. J Am Coll Cardiol. 2010;55(4):283-293. doi:10.1016/j.jacc.2009.07.029. Available at https://www.ncbi.nlm.nih.gov/pmc/articles/PMC2834416/

The consumption of soft drinks can increase the prevalence of NAFLD independently of metabolic syndrome. During regular soft drinks consumption, fat accumulates in the liver by the primary effect of fructose which increases lipogenesis, and in the case of diet soft drinks, by the additional contribution of aspartame sweetener and caramel colorant which are rich in advanced glycation end products that potentially increase insulin resistance and inflammation. Nseir W, Nassar F, Assy N. Soft drinks consumption and nonalcoholic fatty liver disease. World J Gastroenterol. 2010;16(21):2579-2588. doi:10.3748/wjg.v16.i21.2579. Available at https://www.ncbi.nlm.nih.gov/pmc/articles/PMC2880768/

This review has examined how negative emotion can exacerbate sugar overconsumption, and vice versa. If negative emotions are so prevalent in our children, and sugar intake so common, its consumption may be considered a threat to the emotional stability of our race (see reviews on mental health in children and adolescents. More importantly, reduction of sugar overconsumption may be capable of significantly reducing the prevalence of negative emotion in a vast number of individuals around the world. Jacques A, Chaaya N, Beecher K, Ali SA, Belmer A, Bartlett S. The impact of sugar consumption on stress driven, emotional and addictive behaviors. Neuroscience & Biobehavioral Reviews. August 2019;103:178-199. Available at https://www.sciencedirect.com/science/article/pii/S0149763418308613

Our research confirms an adverse effect of sugar intake from sweet food/beverage on long-term psychological health and suggests that lower intake of sugar may be associated with better psychological health. Knüppel A, Shipley MJ, Llewellyn CH, Brunner EJ. Sugar intake from sweet food and beverages, common mental disorder and depression: prospective findings from the Whitehall II study. Sci Rep. 2017;7(1):6287. Published 2017 Jul 27. doi:10.1038/s41598-017-05649-7. Available at https://www.ncbi.nlm.nih.gov/pmc/articles/PMC5532289/

Eggs are Good!

Eggs have been blamed for causing high cholesterol levels and cardiovascular disease. But there is now enough evidence to show that such a simplistic blame is unfair, and instead, eggs may do good rather than harm. No significant association was found between egg consumption and mortality in US adults. Results from three cohorts and from the updated meta-analysis show that moderate egg consumption is not associated with cardiovascular disease risk overall, and is associated with potentially lower cardiovascular disease risk in Asian populations. Egg consumption is also reported to be associated with lower total mortality among the Chinese population.

The 2015–2020 Dietary Guidelines for Americans removed the recommendations of restricting dietary cholesterol to 300 mg/day. Most foods that are rich in cholesterol are also high in saturated fatty acids, exceptions are eggs and shrimp. Eggs are also affordable and nutrient-dense, containing high-quality protein with minimal saturated fatty acids (1.56 gm/egg) and are rich in several micronutrients including vitamins and minerals. Therefore, it would be worthwhile to include eggs in moderation as a part of a healthy eating pattern.

Soliman GA. Dietary Cholesterol and the Lack of Evidence in Cardiovascular Disease. Nutrients. 2018;10(6):780. Published 2018 Jun 16. doi:10.3390/nu10060780. Available at https://www.ncbi.nlm.nih.gov/pmc/articles/PMC6024687/

Xia P-F, Pan X-F, Chen C, Wang Y, Ye Y, Pan A. Dietary Intakes of Eggs and Cholesterol in Relation to All‐Cause and Heart Disease Mortality: A Prospective Cohort Study. Journal of the American Heart Association. May 2020;913. https://doi.org/10.1161/JAHA.119.015743. Available at https://www.ahajournals.org/doi/10.1161/JAHA.119.015743

Drouin-Chartier J-P, Chen S, Li Y et al. Egg consumption and risk of cardiovascular disease: three large prospective US cohort studies, systematic review, and updated meta-analysis

Soriano-Maldonado A, Cuenca-García M, Moreno LA et al. Ingesta de huevo y factores de riesgo cardiovascular en adolescentes; papel de la actividad física. Estudio HELENA. Nutrición Hospitalaria, 2013; 28:868-877 DOI: 10.3305/nh.2013.28.3.6392 See Report

Kuang H, Yang F, Zhang Y, Wang T, Chen G. The Impact of Egg Nutrient Composition and Its Consumption on Cholesterol Homeostasis.  Cholesterol. Volume 2018 |Article ID 6303810 | https://doi.org/10.1155/2018/6303810. Available at https://www.hindawi.com/journals/cholesterol/2018/6303810/

Zhuang P, Jiao J, Wu F, Mao L, Zhang Y. Egg and egg-sourced cholesterol consumption in relation to mortality: Findings from population-based nationwide cohort. Clinical Nutrition. November 2020;39(11):3520-3527. Available at https://www.sciencedirect.com/science/article/abs/pii/S0261561420301369

No association between egg consumption and the incidence of cardiovascular disease: A study that examined the association between egg consumption and incidence of CVD in a prospective dynamic Mediterranean cohort of 14 185 university graduates found no association between egg consumption and the incidence of CVD [Zazpe I et al. Egg consumption and risk of cardiovascular disease in the SUN Project. European Journal of Clinical Nutrition 2011;65:676–682; doi:10.1038/ejcn.2011.30]

Eating two eggs a day could CUT your cholesterol and help you lose weight
Surrey University Study; Reports 1; 2; More Reports Lee A, Griffin B. Dietary cholesterol, eggs and coronary heart disease risk in perspective; Gray J, Griffin B. Eggs and dietary cholesterol – dispelling the myth

Regular eggs ‘no harm to health’
See Full Text Article in Nutrition Bulletin | Report | Report

Gut Microbiota and Diseases

Human intestines are home to more than a trillion microbes, of about 1000 species, weighing more than 2 kgs. These microbes are intricately related to the functions of not only the intestinal tract, but also of every organ in the body, particularly the nervous system, endocrinal system, immune system and several metabolic pathways. Modern diet and lifestyle, and also use of medications, are affecting the quantity, quality and functioning of these microbes. Recent studies have revealed interesting facts about the relationships between gut microbes and human diseases, of the body and the mind.

Gut microbiota and possible molecular pathways linked to cardiovascular and cardiometabolic diseases [See]

Tang WHW, Kitai T, Hazen SL. Gut Microbiota in Cardiovascular Health and Disease. Circulation Research. 2017;120:1183–1196. https://doi.org/10.1161/CIRCRESAHA.117.309715 Available at https://www.ahajournals.org/doi/10.1161/CIRCRESAHA.117.309715

Tang WHW, Li DY, Hazen SL. Dietary metabolism, the gut microbiome, and heart failure. Nat Rev Cardiol 2019;16:137–154. https://doi.org/10.1038/s41569-018-0108-7. Available at https://www.nature.com/articles/s41569-018-0108-7

Gérard C, Vidal H. Impact of Gut Microbiota on Host Glycemic Control. Front. Endocrinol. 30 January 2019 | https://doi.org/10.3389/fendo.2019.00029. Available at https://www.frontiersin.org/articles/10.3389/fendo.2019.00029/full

Thakur AK, Shakya A, Husain GM, Emerald M, Kumar V. Gut-Microbiota and Mental Health: Current and Future Perspectives. J Pharmacol Clin Toxicol 2014;2(1):1016. Available at https://www.jscimedcentral.com/Pharmacology/pharmacology-2-1016.php

Fan Y, Pedersen O. Gut microbiota in human metabolic health and disease. Nat Rev Microbiol (2020). https://doi.org/10.1038/s41579-020-0433-9. Available at https://www.nature.com/articles/s41579-020-0433-9

Ussar S, Fujisaka S, Kahn R. Interactions between host genetics and gut microbiome in diabetes and metabolic syndrome. Molecular Metabolism. September 2016;5(9):795-803. Available at https://www.sciencedirect.com/science/article/pii/S2212877816300977

Herrema H, Niess JH. Intestinal microbial metabolites in human metabolism and type 2 diabetes. Diabetologia 2020;63:2533–2547. https://doi.org/10.1007/s00125-020-05268-4. Available at https://link.springer.com/article/10.1007/s00125-020-05268-4

Anhê FF, Barra NG, Schertzer JD. Glucose alters the symbiotic relationships between gut microbiota and host physiology. Am J Phys End Met. 21 Jan 2020. https://doi.org/10.1152/ajpendo.00485.2019. Available at https://journals.physiology.org/doi/abs/10.1152/ajpendo.00485.2019?journalCode=ajpendo

Scheithauer TPM, Rampanelli E, Nieuwdorp M, Vallance BA, Verchere CB, van Raalte DH, Herrema H. Gut Microbiota as a Trigger for Metabolic Inflammation in Obesity and Type 2 Diabetes. Frontiers in Immunology. 2020;11;2546.
DOI:10.3389/fimmu.2020.571731. Available at https://www.frontiersin.org/article/10.3389/fimmu.2020.571731

Niccolai E, Boem F, Russo E, Amedei A. The Gut–Brain Axis in the Neuropsychological Disease Model of Obesity: A Classical Movie Revised by the Emerging Director “Microbiome”. Nutrients 2019;11(1):156. https://doi.org/10.3390/nu11010156. Available at https://www.mdpi.com/2072-6643/11/1/156/htm

Sohail MU, Althani A, Anwar H, Rizzi R, Marei HE. Role of the Gastrointestinal Tract Microbiome in the Pathophysiology of Diabetes Mellitus. Journal of Diabetes Research. Volume 2017 |Article ID 9631435 | https://doi.org/10.1155/2017/9631435. Available at https://www.hindawi.com/journals/jdr/2017/9631435/

Borrellia A, Bonellia P, Tuccillo M et al. Role of gut microbiota and oxidative stress in the progression of non-alcoholic fatty liver disease to hepatocarcinoma: Current and innovative therapeutic approaches. Redox Biology. May 2018;15:467-479. Available at https://www.sciencedirect.com/science/article/pii/S2213231717309291

Wiest R, Albillos A, Trauner M, Bajaj JS, Jalan R. Targeting the gut-liver axis in liver disease. J Hepatol. November 01, 2017;67(5):1084-1103 DOI:https://doi.org/10.1016/j.jhep.2017.05.007. Available at https://www.journal-of-hepatology.eu/article/s0168-8278(17)32016-0/fulltext

He Ff, Li Ym. Role of gut microbiota in the development of insulin resistance and the mechanism underlying polycystic ovary syndrome: a review. J Ovarian Res 2020;13:73. https://doi.org/10.1186/s13048-020-00670-3. Available at https://ovarianresearch.biomedcentral.com/articles/10.1186/s13048-020-00670-3

ಕೊಬ್ಬು, ಕೊಲೆಸ್ಟರಾಲ್ ಕುರಿತು ನೀವು ತಿಳಿದಿರುವುದು ಸತ್ಯವಲ್ಲ!

ಕೊಬ್ಬು, ಕೊಲೆಸ್ಟರಾಲ್ ಕುರಿತು ನೀವು ತಿಳಿದಿರುವುದು ಸತ್ಯವಲ್ಲ!

ದಿ ಸ್ಟೇಟ್ – ಇಲಾಜು (ಎಪ್ರಿಲ್ 16, 2018)

ಸಮೂಹ ಮಾಧ್ಯಮಗಳು ದುಡ್ಡಿದ್ದವರ, ಅಧಿಕಾರವಿದ್ದವರ ಪ್ರಭಾವಕ್ಕೊಳಗಾಗಿ, ಅನುಕೂಲವೆನಿಸಿದ್ದನ್ನು ಪ್ರಕಟಿಸುವುದು, ಇಲ್ಲದ್ದನ್ನು ಬಿಸುಕುವುದು, ಖಳರನ್ನು ಮಹಾಮಹಿಮರಾಗಿಸುವುದು, ಸುಳ್ಳುಗಳನ್ನು ತಿರುಚಿ ಸತ್ಯವಾಗಿಸುವುದು ನಿತ್ಯದ ಸಂಗತಿಗಳಾಗಿವೆ. ಸುಳ್ಳುಗಳನ್ನು ಹುದುಗಿಸಿ ಮತಿಭ್ರಮಣೆಗೊಳಪಡಿಸುವ ಇಂಥ ಕೆಲಸವನ್ನು ವೈದ್ಯಕೀಯ-ವೈಜ್ಞಾನಿಕ ಪ್ರಕಟಣೆಗಳೂ ಮಾಡುತ್ತಿರುತ್ತವೆ. ಇಪ್ಪತ್ತನೇ ಶತಮಾನದ ಮಧ್ಯದಿಂದ ವೈದ್ಯ ವಿಜ್ಞಾನದ ಸಂಶೋಧನೆಗಳಲ್ಲಿ ಖಾಸಗಿ ಸಂಸ್ಥೆಗಳ ಭಾಗೀದಾರಿಕೆ ಹೆಚ್ಚಿದಂತೆ ಸತ್ಯಗಳನ್ನು ಅಡಗಿಸಿಟ್ಟು, ಸುಳ್ಳುಗಳನ್ನೇ ಸತ್ಯಗಳೆಂದು ಬಿಂಬಿಸಿದ ಹಲವು ನಿದರ್ಶನಗಳು ಬಯಲಾಗಿವೆ.

ಬೊಜ್ಜು, ಮಧುಮೇಹ, ಹೃದ್ರೋಗ ಮುಂತಾದ ಆಧುನಿಕ ಕಾಯಿಲೆಗಳಿಗೆ ಕಾರಣಗಳೇನೆನ್ನುವ ಬಗ್ಗೆ 1950ರಿಂದ ಹಲವು ಅಧ್ಯಯನಗಳು ನಡೆದಿದ್ದವು. ಕೆಲವು ಸಕ್ಕರೆಯ ಅತಿ ಸೇವನೆಯಲ್ಲಿ ದೋಷವನ್ನು ಕಂಡರೆ, ಇನ್ನು ಕೆಲವು ಕೊಬ್ಬಿನ ಸೇವನೆಯನ್ನು ದೂಷಿಸಿದವು. ಆಹಾರೋದ್ಯಮದ ಒತ್ತಡದಿಂದಾಗಿ, ಸಕ್ಕರೆಯೇ ರೋಗಕಾರಕವೆಂದ ವರದಿಗಳಿಗೆ ಪ್ರಕಟಣೆಯ ಭಾಗ್ಯ ದೊರೆಯಲಿಲ್ಲ, ಆ ಅಧ್ಯಯನಗಳ ನೇತೃತ್ವ ವಹಿಸಿದ್ದ ವೈದ್ಯ ವಿಜ್ಞಾನಿಗಳೂ ಮೂಲೆ ಸೇರಬೇಕಾಯಿತು. ಅದಕ್ಕಿದಿರಾಗಿ, ಕೊಬ್ಬಿನಿಂದ ರೋಗಗಳುಂಟಾಗುತ್ತವೆ ಎಂದು ಸಾಧಿಸಿ, ಕೊಬ್ಬು ಸೇವನೆಯನ್ನು ಕಡಿತಗೊಳಿಸಬೇಕೆಂದು ವಾದಿಸಿದ್ದವರು ಪ್ರತಿಷ್ಠಿತ ಟೈಮ್ಸ್‌ ಪತ್ರಿಕೆಯೂ ಸೇರಿದಂತೆ ಎಲ್ಲೆಡೆ ರಾರಾಜಿಸಿದರು. ಅಮೆರಿಕಾದ ಸರಕಾರವೂ ಕೊಬ್ಬಿನಿಂದ ರೋಗವೆನ್ನುವ ವಾದಕ್ಕೆ ಬೆಂಬಲ ನೀಡಿತು, ಕೊಲೆಸ್ಟರಾಲ್ ಸೇವನೆಯನ್ನು ದಿನಕ್ಕೆ 300 ಮಿಗ್ರಾಂಗೆ ಮಿತಗೊಳಿಸಬೇಕೆಂದು ತನ್ನ ಆಹಾರ ಮಾರ್ಗದರ್ಶಿಯಲ್ಲಿ 1980ರಿಂದಲೂ ಹೇಳುತ್ತಲೇ ಬಂತು. ಇಂತಹ ಬೆಂಬಲದೊಂದಿಗೆ ಕಡಿಮೆ ಕೊಬ್ಬು-ಹೆಚ್ಚು ಸಕ್ಕರೆಯ ತಿನಿಸುಗಳನ್ನು ಸಿದ್ಧಪಡಿಸುವ ಉದ್ಯಮವು ವರ್ಷಕ್ಕೆ ನಾಲ್ಕು ಲಕ್ಷ ಕೋಟಿಗಳ ವಹಿವಾಟು ನಡೆಸುವಷ್ಟು ಬೆಳೆಯಿತು.

ನಂತರದ ವರ್ಷಗಳಲ್ಲಿ ಕೊಬ್ಬಿಗಿಂತ ಸಕ್ಕರೆಯೇ ದೊಡ್ಡ ವೈರಿ ಎನ್ನುವುದಕ್ಕೆ ಹಲವಾರು ಸಾಕ್ಷ್ಯಗಳು ದೊರೆತರೂ ಅವನ್ನೆಲ್ಲ ಮುಚ್ಚಿಡಲಾಯಿತು. ಮಕ್ಕಳಲ್ಲಿ ಬೊಜ್ಜುಂಟಾಗಲು ಸಕ್ಕರೆಯೇ ಕಾರಣವೆಂದು ಹೇಳಿದ 2002ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ವರದಿಯು ಕೂಡ ಸಕ್ಕರೆ ತಯಾರಕರ ಒತ್ತಡದಿಂದಾಗಿ ಬದಿಗೆ ಸರಿಯಿತು. ಅಮೆರಿಕಾ ಸರಕಾರದ ಆಹಾರ ಮಾರ್ಗದರ್ಶಿಯ 2015ರ ಕರಡಿನಲ್ಲಿ ಕೊಲೆಸ್ಟರಾಲ್ ಸೇವನೆಗೆ ಮಿತಿಯಿರಬೇಕಿಲ್ಲವೆಂದೂ, ಸಕ್ಕರೆಯ ಸೇವನೆಯೇ ಆಧುನಿಕ ರೋಗಗಳಿಗೆ ಕಾರಣವೆಂದೂ ಹೇಳಲಾಗಿತ್ತಾದರೂ, ಅಂತಿಮ ಪ್ರಕಟಣೆಯಲ್ಲಿ ಮತ್ತೆ ಕೊಲೆಸ್ಟರಾಲ್‌ಗೆ ಮಿತಿಯನ್ನು ಹೇರಿ, ಸಕ್ಕರೆಯ ಮೇಲಿನ ಆರೋಪವನ್ನು ತಗ್ಗಿಸಲಾಯಿತು.

ಯಾರ ವಾದಗಳ ಆಧಾರದಲ್ಲಿ ಈ ಆರು ದಶಕಗಳಲ್ಲಿ ಕೊಬ್ಬನ್ನು ದೂಷಿಸಿ ಸಕ್ಕರೆಯನ್ನು ತಿನ್ನಿಸಲಾಯಿತೋ, ಅವರೇ ನಡೆಸಿದ್ದ ಅಧ್ಯಯನಗಳಲ್ಲಿ ಕೊಬ್ಬನ್ನು ದೂಷಿಸುವುದಕ್ಕೆ ಪುರಾವೆ ದೊರೆತಿರಲಿಲ್ಲ ಎನ್ನುವುದನ್ನು ಅವರದೇ ಸಂಸ್ಥೆಯ ಸಂಶೋಧಕರು ಹೊರಗೆಳೆದು ಎಪ್ರಿಲ್ 2016ರಲ್ಲಿ ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟಿಸಿದರು. ಯಾವ ಅಮೆರಿಕದ ಹೃದ್ರೋಗ ತಜ್ಞರ ಸಮಿತಿಯು ಕೊಲೆಸ್ಟರಾಲ್ ಪ್ರಮಾಣವನ್ನಿಳಿಸಲು ಔಷಧಗಳನ್ನು ಸೇವಿಸಲು ಸೂಚಿಸಿತ್ತೋ, ಅದೇ ಸಮಿತಿಯು ನವಂಬರ್ 2013ರಲ್ಲಿ ಪ್ರಕಟಿಸಿದ ವರದಿಯಲ್ಲಿ ಅಂತಹಾ ಔಷಧಗಳನ್ನು ಮೊದಲಿನಂತೆ ಸೇವಿಸುವ ಅಗತ್ಯವಿಲ್ಲವೆಂದೂ, ಹಾಗೆ ಸೇವಿಸುವುದರಿಂದ ಹೃದಯಾಘಾತವೂ ಸೇರಿದಂತೆ ರಕ್ತನಾಳಗಳ ಕಾಯಿಲೆಯನ್ನು ತಡೆಯಬಹುದೆನ್ನುವುದಕ್ಕೆ ಸಾಕಷ್ಟು ಆಧಾರಗಳಿಲ್ಲವೆಂದೂ ಹೇಳಿತು. ಹಿಂದೆ ಹೇಳಿದ್ದ ಸುಳ್ಳುಗಳು ಹೀಗೆ ಬಯಲಾದರೂ ಕೂಡ, ಮಾಧ್ಯಮಗಳಲ್ಲಿ ಕೊಬ್ಬು ಮತ್ತು ಕೊಲೆಸ್ಟರಾಲಿನ ದೂಷಣೆಯು ಇನ್ನೂ ನಿಂತಿಲ್ಲ.

ಮಧುಮೇಹಕ್ಕೆ ಬಳಸುವ ಕೆಲವು ಮಾತ್ರೆಗಳು ಮತ್ತು ಕೃತಕ ಇನ್ಸುಲಿನ್, ಮೂಳೆಗಳಿಗೆಂದು ನೀಡತೊಡಗಿದ ಕ್ಯಾಲ್ಸಿಯಂ, ಮುಟ್ಟು ನಿಂತ ಬಳಿಕ ಮಹಿಳೆಯರಿಗೆ ನೀಡತೊಡಗಿದ ಇಸ್ಟ್ರೋಜನ್ ಮುಂತಾದ ಕೆಲವು ಔಷಧಗಳ ವಿಚಾರದಲ್ಲೂ ಹೀಗೆಯೇ ಪ್ರಯೋಜನಗಳನ್ನು ಉತ್ಪ್ರೇಕ್ಷಿಸಿ, ಅಡ್ಡ ಪರಿಣಾಮಗಳನ್ನು ಅಡಗಿಸಿಡುವ ಪ್ರಯತ್ನಗಳಾಗಿದ್ದವು. ಮೂಳೆಸವೆತವನ್ನು ತಡೆಯುವುದಕ್ಕಾಗಿ ಮುಟ್ಟು ನಿಂತ ಮಹಿಳೆಯರೆಲ್ಲರೂ ಇಸ್ಟ್ರೋಜನ್ ಮಾತ್ರೆಗಳನ್ನು ಸೇವಿಸಬೇಕೆಂದು ಹೇಳಿ, ಹೃದಯಾಘಾತ, ಪಾರ್ಶ್ವವಾಯು, ಅಲ್ಜೀಮರ್ಸ್ ಕಾಹಿಲೆ, ದಂತ ಕ್ಷಯ ಇತ್ಯಾದಿಗಳನ್ನು ತಡೆಯುವುದಕ್ಕೂ ಅದು ನೆರವಾಗುತ್ತದೆಂದು ಡಂಗುರ ಹೊಡೆದು, 1990ರಿಂದ 2000ದ ದಶಕದಲ್ಲಿ ಅದನ್ನು ಭರ್ಜರಿಯಾಗಿ ಮಾರಲಾಯಿತು. ಆದರೆ, ಇಸ್ಟ್ರೋಜನ್ ಬಳಕೆಯು ಮಹಿಳೆಯರನ್ನು ರಕ್ಷಿಸುವ ಬದಲಿಗೆ, ಸ್ತನದ ಕ್ಯಾನ್ಸರ್, ಹೃದಯಾಘಾತ, ಪಾರ್ಶ್ವವಾಯು ಹಾಗೂ ರಕ್ತ ಹೆಪ್ಪುಗಟ್ಟುವ ಸಮಸ್ಯೆಗಳನ್ನು ಶೇ. 26-41ರಷ್ಟು ಹೆಚ್ಚಿಸುತ್ತದೆ ಎಂದು ದೊಡ್ಡ ಅಧ್ಯಯನವೊಂದು ಗುರುತಿಸಿದ ಬೆನ್ನಿಗೆ, ಇಸ್ಟ್ರೋಜನ್ ಮಾರಾಟವೂ ಅರ್ಧಕ್ಕರ್ಧ ಇಳಿಯಿತು. ಇಸ್ಟ್ರೋಜನ್‌ ಅನ್ನು ಹೊಗಳಿ ವಿದ್ವತ್ ಪತ್ರಿಕೆಗಳಲ್ಲಿ ಬರೆದಿದ್ದ ಹಲವು ಲೇಖನಗಳು ಡಿಸೈನ್ ರೈಟ್ ಎಂಬ ಕಂಪೆನಿಯೇ ಸಿದ್ಧಪಡಿಸಿದ್ದ ಪ್ರೇತಬರಹಗಳಾಗಿದ್ದವೆನ್ನುವುದೂ ಬಯಲಾಯಿತು.

ವಿದ್ವತ್ ಪತ್ರಿಕೆಗಳು ಮಾತ್ರವಲ್ಲ, ವೈದ್ಯ ವಿಜ್ಞಾನದ ಪ್ರಮುಖ ಪಠ್ಯ ಪುಸ್ತಕಗಳ ಬರವಣಿಗೆಯಲ್ಲೂ ಹಣದ ಪ್ರಭಾವವಿರಬಹುದೆಂದು ಇದೇ ಫೆಬ್ರವರಿ 5ರಂದು ಅಮೆರಿಕನ್ ಜರ್ನಲ್ ಆಫ್ ಬಯೋ ಎಥಿಕ್ಸ್‌ನಲ್ಲಿ ಪ್ರಕಟವಾದ ಅಧ್ಯಯನವೊಂದು ಗುರುತಿಸಿದೆ. ವೈದ್ಯ ವಿಜ್ಞಾನದ ವಿದ್ಯಾರ್ಥಿಗಳು ಅತಿ ಹೆಚ್ಚು ಪಾಲಿಸುವ ಹಾರಿಸನ್ಸ್ ಪ್ರಿನ್ಸಿಪಲ್ಸ್ ಆಫ್ ಇಂಟರ್ನಲ್ ಮೆಡಿಸಿನ್ ಹಾಗೂ ಇನ್ನಿತರ ಐದು ಪ್ರಮುಖ ಪಠ್ಯ ಪುಸ್ತಕಗಳ ಒಟ್ಟು 1473 ಲೇಖಕರ ಹೆಸರಲ್ಲಿರುವ ಹಕ್ಕೋಲೆಗಳು ಮತ್ತು ಅವರಿಗೆ ಸಂದ ಸಂಭಾವನೆಗಳನ್ನು ಈ ಅಧ್ಯಯನದಲ್ಲಿ ಪರಿಶೀಲಿಸಲಾಗಿತ್ತು. ಈ ಪುಸ್ತಕಗಳಲ್ಲಿ ಒಟ್ಟು 772 ಅಧ್ಯಾಯಗಳನ್ನು ಬರೆದಿದ್ದ ಈ ಲೇಖಕರು ಬಗೆಬಗೆಯ ಚಿಕಿತ್ಸಾ ಕ್ರಮಗಳು ಹಾಗೂ ಔಷಧಗಳ ಒಟ್ಟು 677 ಹಕ್ಕೋಲೆಗಳನ್ನು ಹೊಂದಿದವರಾಗಿದ್ದರು, ಮತ್ತು 2009-14ರ ಅವಧಿಯಲ್ಲಿ ಒಬ್ಬರಿಗೆ ಗರಿಷ್ಠ 8.7 ಲಕ್ಷ ಡಾಲರ್ (ರೂಪಾಯಿ ಐದೂವರೆ ಕೋಟಿಗೂ ಹೆಚ್ಚು) ನಂತೆ ಔಷಧ ಹಾಗೂ ವೈದ್ಯಕೀಯ ಉಪಕರಣಗಳನ್ನು ತಯಾರಿಸುವ 17 ಕಂಪೆನಿಗಳಿಂದ ಒಟ್ಟು 20 ದಶಲಕ್ಷ ಡಾಲರ್ (ಸುಮಾರು 130 ಕೋಟಿ ರೂಪಾಯಿ) ಸಂಭಾವನೆಗಳನ್ನು ಪಡೆದಿದ್ದರು ಎಂದು ಈ ವರದಿಯಲ್ಲಿ ಹೇಳಲಾಗಿದೆ. ಮಾತ್ರವಲ್ಲ, ಯಾವ ಲೇಖಕನೂ ತಾನು ಪಡೆದ ಸಂಭಾವನೆಗಳ ಬಗ್ಗೆ, ಮತ್ತು ಹೊಂದಿರುವ ಹಕ್ಕೋಲೆಗಳ ಬಗ್ಗೆ, ಈ ಪಠ್ಯಪುಸ್ತಕಗಳಲ್ಲಿ ಘೋಷಿಸಿಕೊಂಡಿಲ್ಲ ಎನ್ನುವುದನ್ನೂ ವರದಿಯಲ್ಲಿ ಎತ್ತಿ ತೋರಿಸಲಾಗಿದೆ. ಹೆಚ್ಚಿನ ವಿದ್ವತ್ ಪತ್ರಿಕೆಗಳು ಹೀಗೆ ಹಿತಾಸಕ್ತಿಯ ಸಂಘರ್ಷಗಳನ್ನು ಘೋಷಿಸಿಕೊಳ್ಳುವುದನ್ನು ಇತ್ತೀಚಿನ ವರ್ಷಗಳಲ್ಲಿ ಕಡ್ಡಾಯಗೊಳಿಸಿದ್ದರೂ, ಪಠ್ಯಪುಸ್ತಕಗಳಲ್ಲಿ ಆ ಕ್ರಮವಿನ್ನೂ ಬಂದಿಲ್ಲ. ಹದಿನಾಲ್ಕು ಭಾಷೆಗಳಲ್ಲಿ, ಒಂದು ಕೋಟಿಗೂ ಹೆಚ್ಚು ಪ್ರತಿಗಳಾಗಿ ವೈದ್ಯ ವಿದ್ಯಾರ್ಥಿಗಳ ಮೇಲೆ ಬಹಳಷ್ಟು ಪ್ರಭಾವ ಬೀರುವ ಹಾರಿಸನ್ಸ್‌ನಂತಹ ಪಠ್ಯಗಳಲ್ಲಿ ಲೇಖಕರ ಹಿತಾಸಕ್ತಿ ಸಂಘರ್ಷಗಳ ಬಗ್ಗೆ ಘೋಷಣೆಗಳಿರಬೇಕೆನ್ನುವ ಬೇಡಿಕೆಯನ್ನು ಈ ಅಧ್ಯಯನವು ಗಟ್ಟಿಗೊಳಿಸಿದೆ. ಸಮೂಹ ಮಾಧ್ಯಮಗಳಿಗೂ ಇದೇ ನೀತಿ ಕಡ್ಡಾಯವಾಗಬಾರದೇಕೆ?

ಈ ವರದಿಯ ಬೆನ್ನಿಗೆ, ಮಾರ್ಚ್ 17ರಂದು, ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟಗೊಂಡ ವರದಿಯಲ್ಲಿ, ಮದ್ಯಪಾನದ ಪರಿಣಾಮಗಳ ಬಗ್ಗೆ ನಾಲ್ಕು ಖಂಡಗಳ 7000 ಜನರ ಮೇಲೆ ನಡೆಸಲಾಗುತ್ತಿರುವ 6 ವರ್ಷಗಳ ಅಧ್ಯಯನವೊಂದಕ್ಕೆ ಮದ್ಯ ತಯಾರಿಸುವ ದೊಡ್ಡ ಕಂಪೆನಿಗಳಿಂದ 10 ಕೋಟಿ ಡಾಲರ್‌ (650 ಕೋಟಿ ರೂಪಾಯಿ) ನೆರವನ್ನು ಪಡೆಯಲಾಗುತ್ತಿದೆ, ಮಾತ್ರವಲ್ಲ, ಈ ಅಧ್ಯಯನದ ವಿವರಗಳನ್ನೆಲ್ಲ ಆ ಕಂಪೆನಿಗಳಿಗೆ ಒದಗಿಸಲಾಗಿದೆ ಎನ್ನುವುದು ಬಯಲಾಗಿದೆ. ಮಿತವಾದ ಮದ್ಯಪಾನವು ಹೃದಯಾಘಾತದಿಂದ ರಕ್ಷಿಸುತ್ತದೆ ಎಂದು ಈ ಹಿಂದೆ ಹಲವು ವರದಿಗಳನ್ನು ಪ್ರಕಟಿಸಿದ್ದ ಹಾವರ್ಡ್ ವಿಶ್ವವಿದ್ಯಾಲಯದ ಕೆನೆತ್ ಮುಕಮಲ್ ಅವರೇ ಈ ಹೊಸ ಅಧ್ಯಯನದ ನೇತೃತ್ವ ವಹಿಸಿದ್ದಾರೆ, ಅದರಲ್ಲಿ ಭಾಗಿಗಳಾಗುವವರಿಗೆ ವಾರಕ್ಕೆ ಮೂರು ಸಲ ಕುಡಿಯುವುದಕ್ಕೆ ಬೇಕಾದಷ್ಟು ಮದ್ಯವನ್ನು ಕಂಪೆನಿಗಳೇ ಪೂರೈಕೆ ಮಾಡಲಿವೆ; ಹಾಗಿರುವಾಗ, ಆ ಅಧ್ಯಯನದ ಫಲಿತಾಂಶವು ಏನಿರಬಹುದೆಂದು ಊಹಿಸುವುದು ಕಷ್ಟವಲ್ಲ. ಒಂದಿಷ್ಟು ಮದ್ಯ ಸೇವಿಸುವವರಲ್ಲೂ ಮಿದುಳಿನ ಸಮಸ್ಯೆಗಳು ಮತ್ತು ಕೆಲವು ಕ್ಯಾನ್ಸರಿನ ಸಾಧ್ಯತೆಗಳು ಹೆಚ್ಚುತ್ತವೆ ಎನ್ನುವುದು ಈಗಾಗಲೇ ದೃಢಪಟ್ಟಿರುವಾಗ, ಮೂರೂವರೆ ಸಾವಿರ ಮಂದಿಗೆ ಕುಡಿಸಿ ಪರೀಕ್ಷಿಸುವುದರ ಔಚಿತ್ಯವೇನು?

ವಿಜ್ಞಾನ-ತಂತ್ರಜ್ಞಾನಗಳು ಅತಿಯಾಗಿ ನೆಚ್ಚಿಕೊಂಡಿರುವ ಸಾಕ್ಷ್ಯಾಧಾರಗಳನ್ನೇ ಬುಡಮೇಲು ಮಾಡಲು ಹಣ ಮತ್ತು ಅಧಿಕಾರವುಳ್ಳವರು ಪ್ರಯತ್ನಿಸುತ್ತಲೇ ಇರುತ್ತಾರೆ, ಆದರೆ, ಇವಕ್ಕೆಲ್ಲ ಬಗ್ಗದ ವಿಜ್ಞಾನಿಗಳು ಅಂತಹಾ ಹುನ್ನಾರಗಳನ್ನು ಬಯಲಿಗೆಳೆಯುತ್ತಲೇ ಇರುತ್ತಾರೆ. ಅಂತಹ ಛಲವೇ ವಿಜ್ಞಾನವನ್ನು ಬೆಳೆಸುತ್ತದೆ, ಸತ್ಯವನ್ನು ಇನ್ನಷ್ಟು ನಿಚ್ಚಳವಾಗಿಸುತ್ತದೆ.

ಷೋಕಿ ನೋವುಗಳ ನಡುವೆ ನರಳದಿರಲಿ ಮಕ್ಕಳು

ಆರೋಗ್ಯ ಆಶಯ – ವಿಜಯ ಕರ್ನಾಟಕ: ಷೋಕಿ ನೋವುಗಳ ನಡುವೆ ನರಳದಿರಲಿ ಮಕ್ಕಳು [ಜುಲೈ 11, 2012, ಬುಧವಾರ] [ನೋಡಿ][ನೋಡಿ

ಮಕ್ಕಳು ಅಮೂಲ್ಯವಾದ ಆಸ್ತಿ, ದೇಶದ ಭವಿಷ್ಯ ಎಂದೆಲ್ಲ ಹೇಳುತ್ತಿರುತ್ತೇವೆ, ಅವರ ಹೆಸರಿನಲ್ಲಿ ಹಲವಾರು ಯೋಜನೆಗಳೂ, ಕಾರ್ಯಕ್ರಮಗಳೂ ನಡೆಯುತ್ತಿರುತ್ತವೆ. ಆದರೆ ನಮ್ಮ ಮಕ್ಕಳಿಂದು ಆರೋಗ್ಯವಂತರಾಗಿ ಬೆಳೆಯುತ್ತಿದ್ದಾರೆಯೇ? ಅಭಿವದ್ಧಿಯ ಭರಾಟೆಯಲ್ಲಿ ದಕ್ಕಿಸಿಕೊಂಡ ಒಂದಷ್ಟು ಸ್ಥಿತಿವಂತರು ತಮ್ಮ ಅಂತಸ್ತನ್ನು ಮೆರೆಸುವ ಹುರುಪಿನಲ್ಲಿ ಮಕ್ಕಳಿಗೆ ಒಳ್ಳೊಳ್ಳೆಯ ಪೋಷಾಕುಗಳನ್ನು ತೊಡಿಸಿ ಮಾರುಕಟ್ಟೆಯಲ್ಲಿ ಸಿಗುವ ಬಗೆಬಗೆಯ ತಿನಿಸುಗಳನ್ನು ಕೊಡಿಸಿ ರಮಿಸುತ್ತಿದ್ದರೆ, ಇದ್ದದ್ದನ್ನೂ ಕಳೆದುಕೊಂಡ ಬಹುಪಾಲು ಜನರು ತಮ್ಮ ಕರುಳಕುಡಿಗಳಿಗೆ ಗೇಣು ಬಟ್ಟೆಗೂ, ತುಂಡು ರೊಟ್ಟಿಗೂ ಪರದಾಡುತ್ತಿದ್ದಾರೆ. ಮಕ್ಕಳ ಪಾಲಿಗೆ ಈ ಅತಿಪೋಷಣೆ-ನ್ಯೂನಪೋಷಣೆಗಳೆರಡೂ ದುರಂತಗಳಾಗಿ, ಅವರಲ್ಲಿ ಹಲವಿಧದ ದೈಹಿಕ ಹಾಗೂ ಬೌದ್ಧಿಕ ಸಮಸ್ಯೆಗಳಿಗೆ ಕಾರಣವಾಗುತ್ತಿವೆ.

ಮಕ್ಕಳ ಪೋಷಣೆಗೂ, ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳಿಗೂ ಅದೆಂತಹ ನಂಟು ನೋಡಿ. ಅಮೆರಿಕಾದಂತಹ ದೇಶಗಳಲ್ಲಿ ಶೇ. 30ರಷ್ಟು ಮಕ್ಕಳಲ್ಲಿ ಅತಿತೂಕವಿದ್ದರೆ, ಆಫ್ರಿಕಾದ ಬಡ ರಾಷ್ಟ್ರಗಳಲ್ಲಿ ಅಂತಹ ಮಕ್ಕಳ ಪ್ರಮಾಣವು ಶೇ. 2ಕ್ಕಿಂತಲೂ ಕಡಿಮೆಯಿದೆ. ನಮ್ಮ ದೇಶದ ಮಕ್ಕಳಲ್ಲಿ ಅತಿತೂಕ ಹಾಗೂ ಬೊಜ್ಜಿನ ಸಮಸ್ಯೆಯು ಕಳೆದೊಂದು ದಶಕದಲ್ಲಿ ದುಪ್ಪಟ್ಟಿಗಿಂತಲೂ ಹೆಚ್ಚಾಗಿದ್ದು, ದಿಲ್ಲಿಯಂತಹ ಮಹಾನಗರಗಳಲ್ಲಿ ಶೇ. 29ರಷ್ಟು ಮಕ್ಕಳಲ್ಲೂ, ಇತರ ಕೆಲ ನಗರಗಳಲ್ಲಿ ಶೇ. 3-7ರಷ್ಟು ಮಕ್ಕಳಲ್ಲೂ ಅತಿತೂಕವಿರುವುದನ್ನು ಗುರುತಿಸಲಾಗಿದೆ. ಖಾಸಗಿ ಶಾಲಾ ವಿದ್ಯಾರ್ಥಿಗಳಲ್ಲಿ, ಸಾಮಾಜಿಕವಾಗಿಯೂ, ಆರ್ಥಿಕವಾಗಿಯೂ ಮೇಲ್ಸ್ತರದಲ್ಲಿರುವ ಮಕ್ಕಳಲ್ಲಿ, ನಗರವಾಸಿ ಮಕ್ಕಳಲ್ಲಿ, ಸೇವಾಕ್ಷೇತ್ರದಲ್ಲಿ ಯಾ ವ್ಯವಹಾರಗಳಲ್ಲಿ ತೊಡಗಿರುವವರ ಮಕ್ಕಳಲ್ಲಿ, ಆಂಗ್ಲ ಮಾಧ್ಯಮಗಳಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿ ಹಾಗೂ ಹೊರಗಡೆ ಅರ್ಧಗಂಟೆಗೂ ಹೆಚ್ಚು ಆಡದಿರುವ ಮಕ್ಕಳಲ್ಲಿ ಅತಿತೂಕದ ಸಮಸ್ಯೆಯು 3-10 ಪಟ್ಟು ಹೆಚ್ಚಿರುವುದು ಕಂಡುಬಂದಿದೆ.

ಹೀಗೆ ಮಕ್ಕಳ ಅತಿತೂಕದ ವಿಚಾರದಲ್ಲಿ ನಮ್ಮ ಮಹಾನಗರಗಳು ಅಮೆರಿಕಕ್ಕೆ ಸರಿಸಾಟಿಯಾಗಿದ್ದರೆ, ಹಸಿವೆಯಿಂದ ನರಳುತ್ತಿರುವ ಮಕ್ಕಳ ವಿಚಾರದಲ್ಲಿ ನಾವು ಆಫ್ರಿಕಾದ ದೇಶಗಳನ್ನೂ ಹಿಂದಿಕ್ಕಿದ್ದೇವೆ, ಮೂರನೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ (2007)ಯನುಸಾರ, ಐದು ವರ್ಷಕ್ಕಿಂತ ಕೆಳಗಿನ ಶೇ. 48ರಷ್ಟು ಮಕ್ಕಳ ಬೆಳವಣಿಗೆಯು ಕುಂಠಿತಗೊಂಡಿದ್ದು, ಶೇ.20ರಷ್ಟು ಮಕ್ಕಳು ಅತಿ ತೀವ್ರವಾದ ನ್ಯೂನಪೋಷಣೆಯಿಂದ ಬಳಲುತ್ತಿದ್ದಾರೆ. ವಿಶ್ವದಲ್ಲಿರುವ ಸುಮಾರು 15 ಕೋಟಿ ನ್ಯೂನಪೋಷಿತ ಮಕ್ಕಳಲ್ಲಿ ಆರು ಕೋಟಿ ಮಕ್ಕಳು ನಮ್ಮಲ್ಲೇ ಇದ್ದು, ಬಿಹಾರ (54%), ಒರಿಸ್ಸಾ (54%) ಹಾಗೂ ಮಧ್ಯ ಪ್ರದೇಶ (55%) ರಾಜ್ಯಗಳು ಆಫ್ರಿಕಾದಲ್ಲಿ ಅತಿ ಹೆಚ್ಚು ನ್ಯೂನಪೋಷಿತ ಮಕ್ಕಳಿರುವ ಅಂಗೋಲ (51%) ವನ್ನೂ ಮೀರಿಸುತ್ತವೆ. ಶ್ರೀಮಂತ ರಾಜ್ಯವೆನಿಸಿರುವ ಗುಜರಾತಿನಲ್ಲಿ ಶೇ. 45ರಷ್ಟು ಮಕ್ಕಳು ನ್ಯೂನಪೋಷಣೆಯಿಂದ ಬಳಲುತ್ತಿದ್ದರೆ, ಕರ್ನಾಟಕ ಹಾಗೂ ಪಂಜಾಬುಗಳಲ್ಲಿ ಶೇ. 38ರಷ್ಟು ಮಕ್ಕಳು ಊಟಕ್ಕಿಲ್ಲದೆ ಸೊರಗುತ್ತಿದ್ದಾರೆ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಅತಿ ಹೆಚ್ಚು ಹಸಿವಿನ ಹದಿನೈದನೇ ರಾಷ್ಟ್ರವೆಂಬ ಕುಗ್ಗಳಿಕೆಯುಳ್ಳ ನಮ್ಮಲ್ಲಿ ಪ್ರತಿ ನಿತ್ಯ 3000 ಮಕ್ಕಳು ಹಸಿವಿನಿಂದಲೂ, ನ್ಯೂನ ಪೋಷಣೆಯಿಂದಲೂ ಸಾಯುತ್ತಿದ್ದಾರೆ.

ನಗರವಾಸಿ ಮಕ್ಕಳಲ್ಲಿ ಶೇ. 30ರಷ್ಟು ಅತಿ ತೂಕದವರು, ಒಟ್ಟು ಮಕ್ಕಳಲ್ಲಿ ಅರ್ಧದಷ್ಟು ನ್ಯೂನ ಪೋಷಣೆಯವರು ಎಂದಾದರೆ, ಆರೋಗ್ಯವಂತರಾಗಿರುವ ಮಕ್ಕಳೆಷ್ಟಿರಬಹುದು? ಊಹಿಸುವುದು ಕಷ್ಟವೇ. ಅತಿಪೋಷಣೆಯಿಂದ ತೂಕವು ಹೆಚ್ಚುವುದಷ್ಟೇ ಅಲ್ಲ, ಮಧುಮೇಹ, ರಕ್ತದ ಏರೊತ್ತಡ, ಮೂಳೆ ಸವೆತ, ರಕ್ತನಾಳಗಳ ಪೆಡಸಾಗುವಿಕೆ ಮುಂತಾದ ಸಮಸ್ಯೆಗಳ ಅಪಾಯವೂ ಹೆಚ್ಚುತ್ತದೆ. ಈ ಹಿಂದೆ 40-50ರ ವಯಸ್ಸಿಗೆ ಮೇಲ್ಪಟ್ಟವರಲ್ಲಿ ಕಂಡುಬರುತ್ತಿದ್ದ ಈ ವ್ಯಾಧಿಗಳು ಇಂದು 10-12ರ ವಯಸ್ಸಿಗೇ ಗೋಚರಿಸುತ್ತಿವೆ. ನ್ಯೂನ ಪೋಷಣೆಯಿಂದ ದೈಹಿಕ ಬೆಳವಣಿಗೆಯು ಕುಂಠಿತಗೊಳ್ಳುವುದಲ್ಲದೆ ರೋಗ ರಕ್ಷಣಾ ವ್ಯವಸ್ಥೆಯೂ ಸೊರಗಿ ವಾಂತಿ-ಬೇಧಿ, ಶ್ವಾಸಾಂಗಗಳ ಸೋಂಕು ಇತ್ಯಾದಿ ಮಾರಣಾಂತಿಕ ರೋಗಗಳಿಗೆ ಕಾರಣವಾಗುತ್ತದೆ. ಅತಿ ಹಾಗೂ ನ್ಯೂನ ಪೋಷಣೆಗಳಿಂದ ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗಳ ಮೇಲೂ ಪರಿಣಾಮವುಂಟಾಗಿ ಏಕಾಗ್ರತೆಯ ಕೊರತೆ, ಗ್ರಹಿಕೆ ಹಾಗೂ ಕಲಿಕೆಯ ತೊಂದರೆಗಳು ಮತ್ತು ಆತಂಕ ಹಾಗೂ ಖಿನ್ನತೆಗಳಂತಹ ಸಮಸ್ಯೆಗಳು ಉಂಟಾಗಬಹುದು. ಹೀಗೆ, ನಮ್ಮ ಮುಂದಿನ ಜನಾಂಗವನ್ನು ದೈಹಿಕವಾಗಿಯೂ, ಬೌದ್ಧಿಕವಾಗಿಯೂ ಅಸಮರ್ಥರನ್ನಾಗಿ ಹಾಗೂ ರೋಗಿಗಳನ್ನಾಗಿ ನಾವಿಂದು ಬೆಳೆಸುತ್ತಿದ್ದೇವೆ. ಆದರೆ ಸ್ಥಿತಿವಂತರಿಗೆ ಇವೆಲ್ಲ ಸಮಸ್ಯೆಯೆಂದೇ ಅನಿಸುವುದಿಲ್ಲ, ನಿರ್ಗತಿಕರಿಗೆ ಇವಕ್ಕೆ ಪರಿಹಾರವೇ ತೋಚುವುದಿಲ್ಲ.

ಸ್ಥಿತಿವಂತ ಹೆತ್ತವರ ಜೊತೆ ಹೆಜ್ಜೆ ಹಾಕುತ್ತಿರುವ ಪುಟ್ಟ ಮಕ್ಕಳನ್ನೊಮ್ಮೆ ನೋಡಿ: ಒಂದು ಕೈಯಲ್ಲಿ ತಿಂಡಿಯ ಕಟ್ಟನ್ನೂ, ಇನ್ನೊಂದರಲ್ಲಿ ಯಾವುದೋ ಪೇಯದ ಪೊಟ್ಟಣವನ್ನೂ ಹಿಡಿದು ಸದಾ ತಿನ್ನುತ್ತಲೇ ಇರುತ್ತಾರೆ. ಮಕ್ಕಳ ಹಠಕ್ಕೆ ಶರಣಾಗತಿ, ಮಕ್ಕಳ ಕಿರಿಕಿರಿ’ ಯನ್ನು ತಡೆಯುವ ಯುಕ್ತಿ, ಮಕ್ಕಳಾದರೂ ತಿಂದು ಸುಖಿಸಲಿ ಎನ್ನುವ ಉದಾರತೆ, ಅವನ್ನೆಲ್ಲ ಖರೀದಿಸುವ ಸಾಮರ್ಥ್ಯವಿದೆಯೆಂಬ ಅಹಮಿಕೆ ? ಹೀಗೆ ಮಕ್ಕಳ ಅತಿ ಪೋಷಣೆಗೆ ಹೆತ್ತವರೇ ಕಾರಣರಾಗುತ್ತಾರೆ. ಒಂದೆರಡು ದಶಕಗಳ ಹಿಂದೆ ಸಿದ್ಧ ತಿನಿಸುಗಳು ದೊರೆಯದೆ ಎಲ್ಲರೂ ಮನೆಯಡುಗೆಯನ್ನೇ ಉಣ್ಣಬೇಕಾದ ಪ್ರಮೇಯವಿತ್ತು. ಇಂದು ಮಹಾಮಳಿಗೆಗಳ ಖರೀದಿಗಾಡಿಗಳಲ್ಲಿ ಬ್ರೆಡ್ಡು, ಬಿಸ್ಕತ್ತು, ನೂಡಲ್ ಗಳು, ಜ್ಯಾಂ, ಸಿಹಿತಿಂಡಿಗಳು, ಲಘು ಪೇಯಗಳ ಬಾಟಲುಗಳು, ಐಸ್ ಕ್ರೀಂ ಡಬ್ಬಗಳು, ಕರಿದ ತಿನಿಸುಗಳು ಇತ್ಯಾದಿಗಳೇ ತುಂಬಿ ತುಳುಕುತ್ತಿರುತ್ತವೆ. ವಿಶ್ವದಲ್ಲೇ ಅತ್ಯಧಿಕ, ವರ್ಷಕ್ಕೆ 2 ಕೋಟಿ ಟನ್, ಸಕ್ಕರೆಯನ್ನು ಸೇವಿಸುವ ನಮಗೆ ಸಕ್ಕರೆಯಿಲ್ಲದೆ ಜೀವನವೇ ಇಲ್ಲ ಎಂಬಂತಾಗಿದೆ!

ಸಕ್ಕರೆ ಹಾಗೂ ಶರಾಬುಗಳ ಮೂಲವೊಂದೇ: ಶರ್ಕರಗಳು. ನಮ್ಮ ಮಿದುಳಿನಲ್ಲಿ ಶರಾಬು ಹಾಗೂ ಸಕ್ಕರೆಗಳು ವರ್ತಿಸುವ ರೀತಿಯೂ ಒಂದೇ: ಮತ್ತೆ ಮತ್ತೆ ಬೇಕೆನ್ನುವ ಚಟವನ್ನುಂಟು ಮಾಡುವುದು. ಚಟಕ್ಕೆ ಬಿದ್ದ ಮಕ್ಕಳು ಇನ್ನಷ್ಟು ಸಕ್ಕರೆಗಾಗಿ ಹಠ ಮಾಡುತ್ತಾರೆ, ಹಠಕ್ಕೆ ಬಾಗಿ ತಿನ್ನಿಸಿದಾಗ ಚಟವು ಇನ್ನಷ್ಟು ಬಲಿಯುತ್ತದೆ ? ಹೀಗೆ ಚಟ-ಹಠದ ವಿಷ ವರ್ತುಲ ಬೆಳೆಯುತ್ತದೆ. ಮಾಧ್ಯಮಗಳ ತುಂಬೆಲ್ಲ ಕಾಣಸಿಗುವ ಸಿದ್ಧ ಆಹಾರಗಳ ಜಾಹೀರಾತುಗಳು ಈ ಚಟದ ಹಠವನ್ನು ಮತ್ತಷ್ಟು ಪ್ರಚೋದಿಸುತ್ತವೆ. ಇನ್ನೊಂದೆಡೆ, ಆಟದ ಬಯಲುಗಳನ್ನೆಲ್ಲ ಕಾಂಕ್ರೀಟಿನ ಬಹುಮಹಡಿ ಕಟ್ಟಡಗಳು ನುಂಗಿ ಹಾಕುತ್ತಿರುವುದರಿಂದ ನಮ್ಮ ಮಕ್ಕಳಿಗೆ ಆಡುವುದಕ್ಕೆ ಜಾಗವಿಲ್ಲದೆ ಟಿವಿ ವೀಕ್ಷಣೆಯಲ್ಲೋ, ವಿಡಿಯೋ ಆಟಗಳಲ್ಲೋ ಕಾಲ ಕಳೆಯುವಂತಾಗಿರುವುದು ಇದಕ್ಕೆ ಇನ್ನಷ್ಟು ಇಂಬು ನೀಡುತ್ತಿದೆ. ಇದೇ ಕಾರಣಕ್ಕೆ, ಪ್ರತಿಷ್ಠಿತ ಪತ್ರಿಕೆಯಾದ ನೇಚರ್ ನ ಫೆಬ್ರವರಿ 2, 2012ರ ಸಂಚಿಕೆಯಲ್ಲಿ ಲಸ್ಟಿಗ್ ಮತ್ತಿತರರು ಬರೆದಿರುವ ಸಕ್ಕರೆಯ ವಿಷಯುಕ್ತ ಸತ್ಯ’ ಎಂಬ ಟಿಪ್ಪಣಿಯಲ್ಲಿ, ಶರಾಬಿನ ಮಾರಾಟವನ್ನು ನಿಯಂತ್ರಿಸಿದಂತೆಯೇ ಸಕ್ಕರೆಯ ಮಾರಾಟವನ್ನೂ ನಿಯಂತ್ರಿಸುವುದು ಅತ್ಯಗತ್ಯ ಎನ್ನುವುದನ್ನು ಒತ್ತಿ ಹೇಳಲಾಗಿದೆ. ಸಕ್ಕರೆಯ ಮೇಲೆ ವಿಪರೀತವಾದ ತೆರಿಗೆಯನ್ನು ವಿಧಿಸುವುದು, ಮಕ್ಕಳು ಸಕ್ಕರೆಯುಕ್ತ ತಿನಿಸುಗಳನ್ನು ಖರೀದಿಸದಂತೆ ನಿರ್ಬಂಧಗಳನ್ನು ಹೇರುವುದು, ಶಾಲೆಗಳ ಬಳಿ ಅವುಗಳ ಮಾರಾಟವನ್ನು ನಿಷೇಧಿಸುವುದು ಇವೇ ಮುಂತಾದ ಕ್ರಮಗಳನ್ನು ಅದರಲ್ಲಿ ಶಿಫಾರಸು ಮಾಡಲಾಗಿದೆ.

ಆದರೆ ಹಿತಾಸಕ್ತಿಯ ತಾಕಲಾಟಗಳೇ ತುಂಬಿರುವ ಮಂತ್ರಿಮಂಡಲಗಳಿಂದ ಇಂತಹಾ ದಿಟ್ಟ ಕ್ರಮಗಳನ್ನು ನಿರೀಕ್ಷಿಸುವುದು ವ್ಯರ್ಥ ಕಾಲಹರಣವಾದೀತು. ಆದ್ದರಿಂದ ಮಕ್ಕಳಲ್ಲಿ ಬೆಳೆಸಿದ ಚಟವನ್ನು ಹೆತ್ತವರೇ ನಿವಾರಿಸುವುದೊಳ್ಳೆಯದು. ಸಕ್ಕರೆ, ಜೇನು, ಬೆಲ್ಲ, ಹಣ್ಣುಗಳಾದಿಯಾಗಿ ಎಲ್ಲಾ ಸಿಹಿತಿನಿಸುಗಳು ಹಾಗೂ ಪೇಯಗಳು, ಕತಕ ಸಿಹಿಕಾರಕಗಳು ಹಾಗೂ ಎಲ್ಲಾ ಸಿದ್ಧ ತಿನಿಸುಗಳನ್ನು ಮಕ್ಕಳಿಂದ ದೂರವಿಡಬೇಕು. ಮನೆಯಲ್ಲಿ ಪರಂಪರಾಗತವಾದ ಅಡುಗೆಯನ್ನೇ ಉಂಡು ಶಾಲೆಯ ಬುತ್ತಿಯಲ್ಲೂ ಅದನ್ನೇ ಕಟ್ಟಿಕೊಳ್ಳಬೇಕು. ತರಕಾರಿಗಳು, ಕಾಳುಗಳು, ಮೀನು, ಮೊಟ್ಟೆ, ಮಾಂಸ, ಬಾದಾಮಿ ಹಾಗೂ ಆಕ್ರೋಡಿನಂತಹ ಬೀಜಗಳು ಮಕ್ಕಳ ಸಮತೂಕದ ಆಹಾರದಲ್ಲಿರಬೇಕು. ಸಿಹಿತಿನಿಸುಗಳ ಬದಲಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ಕೊಟ್ಟರೆ ಮಕ್ಕಳ ದೈಹಿಕ ಆರೋಗ್ಯವನ್ನು ರಕ್ಷಿಸಿ ಬೌದ್ಧಿಕ ಬೆಳವಣಿಗೆಯನ್ನು ಪೋಷಿಸಿದಂತಾಗುತ್ತದೆ.

ಅತಿಪೋಷಣೆಗೆ ಹೆತ್ತವರೇ ಕಾರಣರಾಗಿದ್ದರೆ, ನ್ಯೂನಪೋಷಣೆಗೆ ಸರಕಾರದ ಆರ್ಥಿಕ ಧೋರಣೆಗಳು, ಹೆಚ್ಚುತ್ತಿರುವ ನಿರುದ್ಯೋಗ ಹಾಗೂ ಬಡತನ, ಅನಕ್ಷರತೆ ಹಾಗೂ ಅಜ್ಞಾನ, ಕುಡಿಯುವ ನೀರು ಹಾಗೂ ನೈರ್ಮಲ್ಯಗಳ ಕೊರತೆಗಳೆಲ್ಲವೂ ಕಾರಣಗಳಾಗಿವೆ. ಲಿಂಗ ತಾರತಮ್ಯದಿಂದಾಗಿ ತಾಯಂದಿರಿಗೆ ಸೂಕ್ತವಾದ ಪೌಷ್ಟಿಕ ಆಹಾರವಾಗಲೀ, ಆರೋಗ್ಯ ರಕ್ಷಣೆಯಾಗಲೀ ದೊರೆಯದೆ ಗರ್ಭದೊಳಗೂ, ಜನನಾನಂತರವೂ ಮಕ್ಕಳ ಬೆಳವಣಿಗೆಯ ಮೇಲೆ ವ್ಯತಿರಿಕ್ತವಾದ ಪರಿಣಾಮಗಳಾಗುತ್ತವೆ. ಸರಕಾರದ ಅಸಡ್ಡೆ ಹಾಗೂ ವ್ಯಾಪಕವಾದ ಭ್ರಷ್ಟಾಚಾರಗಳಿಂದಾಗಿ ಸಾರ್ವಜನಿಕ ಆಹಾರ ಪೂರೈಕೆಯೂ, ಸಮಗ್ರ ಶಿಶುಕಲ್ಯಾಣ ಯೋಜನೆಗಳಂತಹ ಕಾರ್ಯಕ್ರಮಗಳೂ, ಮಧ್ಯಾಹ್ನದ ಬಿಸಿಯೂಟದಂತಹಾ ಯೋಜನೆಗಳೂ ಹಸಿದವರ ಪಾಲಿಗೆ ಮರೀಚಿಕೆಗಳಾಗಿವೆ. ಆಹಾರ ಧಾನ್ಯಗಳ ಬದಲಿಗೆ ನಗದು ಬೆಳೆಗಳನ್ನು ಬೆಳೆಯತೊಡಗಿ ಅತ್ತ ಬೆಲೆಯೂ, ಇತ್ತ ಅನ್ನವೂ ಇಲ್ಲದಂತಾಗಿದೆ. ಹೀಗೆ ಮಕ್ಕಳ ಬದುಕೇ ದುಸ್ತರವಾಗಿರವಾಗ ಕಲಿಕೆಯು ಅಸಾಧ್ಯವಾಗಿ ಅತುಲ್ಯ ಭಾರತವು ಹಸಿವಿನಲ್ಲೇ ಕಮರಿ ಹೋಗುತ್ತಿದೆ.

ಇವನ್ನೆಲ್ಲ ಸರಿಪಡಿಸಬೇಕಾದರೆ ಸರಕಾರಗಳಿಗೆ ಇಚ್ಛಾಶಕ್ತಿಯೂ, ಜನಸ್ನೇಹಿ ಧೋರಣೆಗಳೂ ಇರಬೇಕಾಗುತ್ತವೆ, ಅದಕ್ಕಾಗಿ ನಮ್ಮೆಲ್ಲರ ನಿರಂತರವಾದ ಒತ್ತಡಗಳೂ ಅಗತ್ಯವಾಗುತ್ತವೆ. ನಮ್ಮ ಊರು-ಕೇರಿಗಳಲ್ಲಿ ನರಳುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರವೂ, ಇತರೆಲ್ಲಾ ಸೌಲಭ್ಯಗಳೂ ದೊರೆಯುವಂತೆ ಸ್ಥಳೀಯಾಡಳಿತಗಳಿಗೆ ಚುರುಕು ಮುಟ್ಟಿಸುವ ಕೆಲಸವಾಗಲೇಬೇಕು. ಉಳ್ಳವರು ದುಬಾರಿಯಾದ ಊಟೋಪಚಾರಗಳಿಗೆ ಹಣವನ್ನು ಪೋಲು ಮಾಡುವ ಮೊದಲು ಹೊಟ್ಟೆಗಿಲ್ಲದ ಮಕ್ಕಳತ್ತ ಗಮನ ಹರಿಸಬಹುದು; ಮಠ-ದೇವಾಲಯಗಳ ಹುಂಡಿಗಳಿಗೆ ಸುರಿಯುವ ಬದಲು ಹಸಿದ ಹೊಟ್ಟೆಗಳಿಗೆ ಊಟವಿಕ್ಕಬಹುದು.

ಉಳ್ಳವರ ಷೋಕಿಯಾಗಲೀ, ಇಲ್ಲದವರ ಕಷ್ಟಗಳಾಗಲೀ ನಮ್ಮ ಮುಂದಿನ ಜನಾಂಗದ ಆಹಾರವನ್ನೂ, ಆರೋಗ್ಯವನ್ನೂ ಕಾಡಗೊಡದೆ, ನಮ್ಮ ಮಕ್ಕಳ ಆಹಾರವೇ ನಮ್ಮೆಲ್ಲರ ಆದ್ಯತೆಯಾಗಬೇಕು. ಮಕ್ಕಳಿಗೆ ಸರಿಯಾದ ಊಟವನ್ನೂ ನೀಡದಿರುವಂತಹ ದೌರ್ಜನ್ಯವು ಈ ಕೂಡಲೇ ಕೊನೆಗೊಳ್ಳಬೇಕು.

ಮಾಂಸಾಹಾರ ಸೇವನೆಯು ಅಮಾನವೀಯ ದುರ್ಗುಣವೇ? 

ಆರೋಗ್ಯ ಆಶಯ – ವಿಜಯ ಕರ್ನಾಟಕ: ಮಾಂಸಾಹಾರ ಸೇವನೆಯು ಅಮಾನವೀಯ ದುರ್ಗುಣವೇ? [ಸೆಪ್ಟೆಂಬರ್ 19, 2012, ಬುಧವಾರ] [ನೋಡಿ]

ನಮ್ಮ ಆಹಾರವು ಶರೀರಕ್ಕೆ ಅನುಗುಣವಾಗಿರಬೇಕು, ಭಾವನೆಗಳಿಗಲ್ಲ

‘ಅಯ್ಯೋ, ನಾನು ಹುಟ್ಟಿನಿಂದಲೇ ಸಸ್ಯಾಹಾರಿ, ಸಾಯೋವರೆಗೂ ಮೀನು-ಮೊಟ್ಟೆ ಮುಟ್ಟಲಾರೆ’ ಎನ್ನುವ ಹಠವಾದಿಗಳೂ, ‘ನಮ್ಮ ಧರ್ಮದವರೆಲ್ಲಾ ಒಂದು, ಆದರೆ ಮಾಂಸಾಹಾರಿಗಳೊಡನೆ ಕೂರಲಾರೆ’ ಎನ್ನುವ ಮಠಾಧೀಶರೂ, ‘ಬಿಸಿಯೂಟದಲ್ಲಿ ಮೊಟ್ಟೆ ಕೊಟ್ರೆ ಮಕ್ಕಳು ಕೆಟ್ಟು ಕ್ರೂರಿಗಳಾಗ್ತಾರೆ’ ಎನ್ನುವ ಮಂತ್ರಿಗಳೂ, ‘ಮೀನು-ಮಾಂಸದ ವಾಸನೆ ಆಗೋದಿಲ್ಲ’ ಅಂತ ಮೂಗು ಮುರಿಯುವ ಪ್ರಗತಿಪರರೂ ನಮ್ಮಲ್ಲಿದ್ದಾರೆ. ಇಂತಹ ವೈಯಕ್ತಿಕ ಅಭಿಪ್ರಾಯಗಳು ಇತರರ ಊಟದ ಮೇಲೆ ಪ್ರಭಾವ ಬೀರಬಹುದೆನ್ನುವ ಕಾರಣಕ್ಕೆ ಅವನ್ನು ಒರೆಗೆ ಹಚ್ಚುವುದೊಳ್ಳೆಯದು.

ಮನುಷ್ಯರು ಹುಟ್ಟಿನಿಂದಲೇ ಸಸ್ಯಾಹಾರಿಗಳೇ? ಆಧುನಿಕ ಮಾನವ ವಿಕಾಸಗೊಂಡದ್ದು ಪೂರ್ವ ಆಫ್ರಿಕಾದ ಸೀಳು ಕಣಿವೆಗಳಲ್ಲಿ, ಸುಮಾರು 2 ಲಕ್ಷ ವರ್ಷಗಳ ಹಿಂದೆ. ಇಂದು ವಿಶ್ವದಾದ್ಯಂತವಿರುವ 700 ಕೋಟಿ ಮನುಷ್ಯರೆಲ್ಲರೂ ಆಫ್ರಿಕಾದ ಈ ಮೂಲ ಸಂತತಿಯಿಂದ ಕಾಲಾಂತರದಲ್ಲಿ ಹುಟ್ಟಿದ ಹತ್ತು ಗಂಡಸರು ಹಾಗೂ ಹದಿನೆಂಟು ಹೆಂಗಸರ ಪೀಳಿಗೆಗಳಿಗೆ ಸೇರಿದವರು. ನಮ್ಮೆಲ್ಲರೊಳಗಿರುವ 20687 ವಂಶವಾಹಿಗಳಲ್ಲಿ ಶೇ.99.99ರಷ್ಟು ಸಾಮ್ಯತೆ; ಎಲ್ಲರೊಂದೇ – ಮನುಜರು! ಮಾಂಸಾಹಾರವೇ ನಮ್ಮ ವಿಕಾಸಕ್ಕೆ ಮೂಲ ಕಾರಣ – ನಮ್ಮೆಲ್ಲರ ಪೂರ್ವಜರು ಆ ಕಣಿವೆಗಳ ಹಳ್ಳಕೊಳ್ಳಗಳಲ್ಲಿದ್ದ ಮೀನು, ಆಮೆ, ಮೊಸಳೆ ಇತ್ಯಾದಿ ಜಲಚರಗಳನ್ನು ಕಲ್ಲುಗಳಿಂದ ಹೊಡೆದು ಭಕ್ಷಿಸಿದ್ದರಿಂದಲೇ ನಮ್ಮ ಮೆದುಳು ಇಷ್ಟೊಂದು ದೊಡ್ಡದಾಗಿ, ಚುರುಕಾಗಿ ಬೆಳೆಯಿತು; ನಮ್ಮ ಮೆದುಳಿನ ರಚನೆಯಲ್ಲಿ ಮೀನಿನೆಣ್ಣೆಗಳ ಪಾಲು ಶೇ. 60ರಷ್ಟು! ಮಾಂಸವನ್ನು ಸಿಗಿಯಲು ನಾವು ಬಳಸಿದ್ದು, ಬಳಸುತ್ತಿರುವುದು ಕೋರೆ ಹಲ್ಲುಗಳನ್ನಲ್ಲ, ಬದಲಿಗೆ ಚೂಪು ಕಲ್ಲುಗಳನ್ನು, ಈಟಿ-ಭರ್ಜಿಗಳನ್ನು, ಚೂರಿ-ಮುಳ್ಳು ಚಮಚಗಳನ್ನು. ನಮ್ಮ ಪಚನಾಂಗದ ರಚನೆಯೂ ಮಿಶ್ರಾಹಾರಕ್ಕೆ ಪೂರಕ – ಮಾಂಸಾಹಾರಿ ಪ್ರಾಣಿಗಳಿಗಿಂತ ಉದ್ದ, ಸಸ್ಯಾಹಾರಿಗಳಿಗಿಂತ ಗಿಡ್ಡ. ಹೀಗೆ ನಾವು ಮನುಜರೆಲ್ಲರೂ ಮೀನು-ಮಾಂಸ-ಮೊಟ್ಟೆಗಳನ್ನು ಸುಲಭದಲ್ಲಿ ಅರಗಿಸಿಕೊಳ್ಳಬಲ್ಲ ಮಾಂಸಾಹಾರಿಗಳು.

ಆಫ್ರಿಕಾದಿಂದ ಹೊರಟ ಮಾನವರ ದಂಡು ಸುಮಾರು 60000 ವರ್ಷಗಳ ಹಿಂದೆ ಭರತ ಖಂಡವನ್ನು ತಲುಪಿತು. ಸುಮಾರು 10000 ವರ್ಷಗಳ ಹಿಂದಿನವರೆಗೂ ವಿವಿಧ ಜಲಚರಗಳು, ಕಾಡುಪ್ರಾಣಿಗಳು ಹಾಗೂ ಸೊಪ್ಪು-ತರಕಾರಿಗಳೇ ನಮ್ಮ ಪೂರ್ವಜರ ಆಹಾರಗಳಾಗಿದ್ದವು. ಸುಮಾರು 9000 ವರ್ಷಗಳ ಹಿಂದೆ ಮೆಹರ್ ಘರ್ ಪ್ರದೇಶದಲ್ಲಿ (ಇಂದಿನ ಬಲೂಚಿಸ್ತಾನ) ಗೋಧಿ, ಬಾರ್ಲಿಗಳಂತಹ ಧಾನ್ಯಗಳನ್ನು ಬೆಳೆಯಲಾರಂಭಿಸಲಾಯಿತು, ಜೊತೆಗೆ ಕುರಿ, ಆಡು ಹಾಗೂ ಆಕಳುಗಳನ್ನು ಕೃಷಿಗಾಗಿಯೂ, ಮಾಂಸಕ್ಕಾಗಿಯೂ ಪಳಗಿಸಲಾಯಿತು. ಆಹಾರವನ್ನು ಹುಡುಕಿ ಅಂಡಲೆಯುವ ಬದಲು ಒಂದೆಡೆ ನೆಲೆ ನಿಂತು ಉತ್ಪಾದಿಸತೊಡಗಿದಾಗ ನಾಗರಿಕತೆ ಹುಟ್ಟಿತು, ತಂತ್ರಜ್ಞಾನ ಬೆಳೆಯಿತು. ಸುಮಾರು 3500 ವರ್ಷಗಳ ಹಿಂದೆ ಯುರೇಷಿಯಾದಲ್ಲಿ ಅದಾಗಲೇ ನೆಲೆಸಿದ್ದ ಇನ್ನೊಂದಷ್ಟು ಜನ ಭಾರತಕ್ಕೆ ವಲಸೆ ಬಂದರು; ಅವರ ಜೀವನಕ್ರಮಗಳೂ, ವೇದಗಳೂ ಬಂದವು, ಜೊತೆಗೆ ಮೇಲು-ಕೀಳುಗಳೂ, ಅಸ್ಪೃಶ್ಯತೆಗಳೂ ಬೆಳೆದವು.

ಆ ಕಾಲದಲ್ಲಿ ಎಲ್ಲರ ತಟ್ಟೆಗಳಲ್ಲೂ ಮಾಂಸವಿತ್ತು, ಅದು ಅತ್ಯುತ್ತಮವೆನ್ನುವ ಅರಿವೂ ಇತ್ತು.(ಶತಪಥ ಬ್ರಾಹ್ಮಣ, 11.7.1.3) ತಿನ್ನುವ ಮಾಂಸಗಳು, ಸಸ್ಯಗಳು, ಧಾನ್ಯಗಳು ಎಲ್ಲಕ್ಕೂ ಹಿಂಸೆಯಾಗುತ್ತವೆ ಎಂಬ ಪರಿವೆಯೂ ಇತ್ತು; ಅದಕ್ಕಾಗಿ ಪರಮ ಶಕ್ತಿಗೆ ಸಮರ್ಪಿಸಿ ತಿನ್ನಬೇಕೆನ್ನುವ ನಿವಾರಣೋಪಾಯವನ್ನೂ ಮಾಡಲಾಗಿತ್ತು; ತಪ್ಪಿದಲ್ಲಿ ಇನ್ನೊಂದು ಲೋಕದಲ್ಲಿ ಅವುಗಳಿಂದಲೇ ತಿನ್ನಲ್ಪಡಬೇಕಾದೀತು ಎಂದು ಆಹಾರಗಳಿಗೆಲ್ಲ ಗೌರವವನ್ನೂ ಒದಗಿಸಲಾಗಿತ್ತು. (ಜೈಮಿನೀಯ ಬ್ರಾಹ್ಮಣ, 1.42-44; ಶತಪಥ ಬ್ರಾಹ್ಮಣ, 12.9.1.1) ಮುಂದೆ ದೇವತೆಗಳ ಹೆಸರಲ್ಲಿ ನೂರುಗಟ್ಟಲೆ ಪ್ರಾಣಿ-ಪಕ್ಷಿಗಳ ಮಾರಣಹೋಮ ನಡೆಸುವ ಆಚರಣೆಗಳು ಅತಿರೇಕಕ್ಕೇರಿದಾಗ ಪ್ರತಿರೋಧವೂ ಹೆಚ್ಚಿತು. ಸುಮಾರು 2600 ವರ್ಷಗಳ ಹಿಂದೆ, ಕರುಣೆ, ಅಹಿಂಸೆ, ಪರಿಶುದ್ಧತೆ ಹಾಗೂ ವಿರಕ್ತಿಗಳನ್ನು ಬೋಧಿಸಿದ ಜೈನ ಧರ್ಮದಿಂದ ಪ್ರೇರಿತರಾದವರು ಮಾಂಸವನ್ನೂ, ಕೆಲ ಸಸ್ಯಗಳನ್ನೂ ವರ್ಜಿಸಿದರು. ಅದೇ ಕಾಲದಲ್ಲಿ ಗೌತಮ ಬುದ್ಧರು ಅನಗತ್ಯವಾದ ಪ್ರಾಣಿಹಿಂಸೆಯನ್ನು ಬಲವಾಗಿ ವಿರೋಧಿಸಿದರು, ಆದರೆ ಮಾಂಸಾಹಾರಕ್ಕೆ ಅಡ್ಡಿ ಪಡಿಸಲಿಲ್ಲ. ಜೈನ, ಬೌದ್ಧ ಧರ್ಮಗಳ ಜನಪ್ರಿಯತೆ ಹೆಚ್ಚಿದಂತೆ ವೈದಿಕ ವ್ಯವಸ್ಥೆಯಲ್ಲೂ ಸುಧಾರಣೆಗಳಾಗಿ,ಆಹಾರವನ್ನು ಕ್ರಮಬದ್ಧವಾಗಿ ತಿನ್ನಬೇಕೆನ್ನುವ ಕಟ್ಟಳೆಗಳನ್ನು ಮತ್ತೆ ಬಲಪಡಿಸಲಾಯಿತು. ಹೀಗೆ, ತಿನ್ನಲಿಕ್ಕಾಗಿಯೇ ಸೃಷ್ಟಿಸಲ್ಪಟ್ಟಿರುವ ಪ್ರಾಣಿಗಳನ್ನು ಬ್ರಾಹ್ಮಣರು ಪ್ರತಿನಿತ್ಯವೂ ತಿನ್ನಬಹುದು, ಆದರೆ, ವಿಧಿಬಾಹಿರವಾಗಿ ತಿಂದರೆ ಮರಣಾನಂತರ ಈ ವಧಿತ ಪ್ರಾಣಿಗಳಿಗೆ ಆಹಾರವಾಗಬೇಕಾಗುತ್ತದೆ ಎಂದು ಮನುಸ್ಮೃತಿಯಲ್ಲಿ (5:28-33) ಹೇಳಲಾಗಿದೆ. ಕುರಾನ್ (2:172) ಹಾಗೂ ಬೈಬಲ್ (ಆದಿ ಕಾಂಡ, 9:3; ಧರ್ಮೋಪದೇಶ ಕಾಂಡ, 12:15) ಗಳಲ್ಲೂ ಮಾಂಸಾಹಾರಕ್ಕೆ ಅನುಮೋದನೆಯಿದ್ದು, ದೇವರು ಒದಗಿಸಿರುವ ಎಲ್ಲಾ ಒಳ್ಳೆಯ ಸಸ್ಯ-ಮಾಂಸಗಳನ್ನು ಕೃತಜ್ಞತೆಯಿಂದ ಇಚ್ಛಾನುಸಾರ ತಿನ್ನಬಹುದೆಂದು ಹೇಳಲಾಗಿದೆ. ಹೀಗೆ ಹೆಚ್ಚಿನ ಧರ್ಮಗಳಲ್ಲಿ ಪ್ರಾಣಿಹಿಂಸೆಯನ್ನು ಕನಿಷ್ಠಗೊಳಿಸಿ ಮಾಂಸಾಹಾರವನ್ನು ಅನುಮೋದಿಸಲಾಗಿದೆ. ಇಂದು ಜಗತ್ತಿನ ಶೇ. 95ಕ್ಕೂ ಹೆಚ್ಚು ಜನ ಮಾಂಸಾಹಾರಿಗಳೇ ಆಗಿದ್ದಾರೆ; ನಮ್ಮ ದೇಶದಲ್ಲೂ ಶೇ. 45ರಷ್ಟು ಬ್ರಾಹ್ಮಣರೂ ಸೇರಿದಂತೆ ಶೇ. 88ರಷ್ಟು ಮಾಂಸಾಹಾರಿಗಳಿದ್ದಾರೆ.

ಮಾಂಸಾಹಾರದಿಂದ ತಾಮಸ ಗುಣವುಂಟಾಗಿ ಕ್ರೌರ್ಯವು ಹೆಚ್ಚುತ್ತದೆಯೇ? ಮಠಾಧೀಶರು, ಮಂತ್ರಿಗಳಷ್ಟೇ ಅಲ್ಲ, ಆಯುರ್ವೇದ ಮತ್ತು ಯೋಗ ಪಂಡಿತರೆನಿಸಿಕೊಂಡ ಹಲವರೂ ಹಾಗನ್ನುತ್ತಾರೆ. ಅದು ನಿಜವಿದ್ದರೆ ಶೇ.95ರಷ್ಟು ಜನರು ಕ್ರೂರಿಗಳಾಗಬೇಕಿತ್ತು! ಅಪ್ಪಟ ಸಸ್ಯಾಹಾರಿಯೂ, ಪ್ರಾಣಿದಯಾಪರನೂ ಆಗಿದ್ದ ಹಿಟ್ಲರನಿಂದ ಆರು ಕೋಟಿ ಜನ ಸಾಯಬಾರದಿತ್ತು! ಹಾಗಾದರೆ, ಮಾಂಸಾಹಾರವು ತಾಮಸಿಕವೆನ್ನುವುದಕ್ಕೆ ಆಧಾರಗಳೆಲ್ಲಿ? ಆಯುರ್ವೇದದ ಮೇರುಕೃತಿಗಳಾದ ಚರಕ ಸಂಹಿತೆ (ಸೂತ್ರಸ್ಥಾನ, 27) ಹಾಗೂ ಅಷ್ಟಾಂಗ ಹೃದಯ (ಸೂತ್ರಸ್ಥಾನ, 6) ಗಳಲ್ಲಿ 350ರಷ್ಟು ಆಹಾರವಸ್ತುಗಳ ವಿವರಗಳಿದ್ದರೂ, ಸಾತ್ವಿಕ, ರಾಜಸಿಕ ಯಾ ತಾಮಸಿಕ ಆಹಾರಗಳೆಂಬ ವಿಚಾರವೇ ಅಲ್ಲಿಲ್ಲ. ಬದಲಿಗೆ, ಹುಲಿ, ಸಿಂಹ, ಜಾನುವಾರುಗಳು ಸೇರಿದಂತೆ 160ಕ್ಕೂ ಹೆಚ್ಚು ಪ್ರಾಣಿ-ಪಕ್ಷಿಗಳ ಮಾಂಸ-ಮೊಟ್ಟೆಗಳ ಗುಣಾವಗುಣಗಳನ್ನು ವಿಶ್ಲೇಷಿಸಿ, ಮಾಂಸಾಹಾರದಷ್ಟು ಅತ್ಯುತ್ತಮವಾದ ಪೋಷಣೆ ಬೇರೊಂದಿಲ್ಲ ಎಂದು ಅವುಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ (ಸೂತ್ರಸ್ಥಾನ, 27:87). ಚರಕ ಸಂಹಿತೆಯಲ್ಲಿ ತಾಮಸ ಗುಣವುಳ್ಳವನನ್ನು ಮೂಢ, ಪುಕ್ಕಲು, ಸೋಮಾರಿ, ಹೇಡಿ, ಹೊಟ್ಟೆಬಾಕ ಎಂದೆಲ್ಲಾ ವಿವರಿಸಲಾಗಿದ್ದು, ಕ್ರೂರಿಯೆಂದು ಹೇಳಿಯೇ ಇಲ್ಲ (ಶರೀರಸ್ಥಾನ, 4:36-40); ಮಾತ್ರವಲ್ಲ, ಈ ಮೂರು ಮನೋಗುಣಗಳೂ ಹುಟ್ಟಿನಿಂದಲೇ ಬರುತ್ತವೆಯೆಂದು ಹೇಳಲಾಗಿದ್ದು, ಯಾವುದೇ ಆಹಾರಗಳಿಂದ ಉಂಟಾಗಬಹುದೆಂದಿಲ್ಲ.(ಶರೀರಸ್ಥಾನ, 8:16) ಭಗವದ್ಗೀತೆಯಲ್ಲಿ (17:8-10) ಈ ಮನೋಗುಣಗಳುಳ್ಳವರು ಬಯಸುವ ಆಹಾರಗಳ ಬಗ್ಗೆ ಹೇಳಲಾಗಿದ್ದರೂ, ಆಹಾರದಿಂದ ಅಂತಹಾ ಗುಣಗಳು ಉಂಟಾಗುತ್ತವೆಯೆಂದಾಗಲೀ, ಸಾತ್ವಿಕ ಗುಣವುಳ್ಳವರು ಮಾಂಸವನ್ನು ತಿನ್ನುವುದಿಲ್ಲವೆಂದಾಗಲೀ ಹೇಳಿಲ್ಲ. ನಿಜವೆಂದರೆ, ಆಹಾರದಲ್ಲಿ ಮೀನಿನೆಣ್ಣೆಯ ಕೊರತೆಯಿಂದ ಮಾನಸಿಕ ಖಿನ್ನತೆ, ಆತಂಕ, ಏಕಾಗ್ರತೆಯ ಕೊರತೆ, ಕಲಿಕೆಯ ತೊಂದರೆಗಳು, ಮರೆಗುಳಿತನ ಇತ್ಯಾದಿಗಳು ಉಂಟಾಗುತ್ತವೆಯೆಂದೂ, ಗರ್ಭಾವಸ್ಥೆಯ ಕೊನೆಯ ಮೂರು ತಿಂಗಳುಗಳಲ್ಲಿ ಹಾಗೂ ಮಗುವಿನ ಸ್ತನಪಾನದ ವೇಳೆ ಮೀನಿನ ಸೇವನೆ ಅತ್ಯಗತ್ಯವೆಂದೂ ಇತ್ತೀಚಿನ ಹಲವು ಅಧ್ಯಯನಗಳು ಶ್ರುತಪಡಿಸಿವೆ. ಇದಕ್ಕಿದಿರಾಗಿ, ಸಕ್ಕರೆಯ ಅತಿಸೇವನೆಯಿಂದ ಚಿತ್ತಚಾಂಚಲ್ಯ, ಮಂಕುತನ ಹಾಗೂ ಹಲವಿಧದ ಭಾವನಾತ್ಮಕ ಸಮಸ್ಯೆಗಳು ಉಂಟಾಗಬಹುದೆನ್ನುವುದೂ ಈಗ ಸಿದ್ಧಗೊಂಡಿದೆ. ಹಾಗಿರುವಾಗ ಸಾತ್ವಿಕ ಯಾವುದು, ತಾಮಸಿಕ ಯಾವುದು?

ಮಾಂಸಾಹಾರ ನಮಗೆ ಅತ್ಯಗತ್ಯವೇ? ನಮಗೆ ದಿನವೊಂದಕ್ಕೆ ಕನಿಷ್ಠ 45-60ಗ್ರಾಂ ಪ್ರೊಟೀನು ಅಗತ್ಯವಿದ್ದು, ಸಸ್ಯಾಹಾರವನ್ನೇ ನೆಚ್ಚಿಕೊಂಡಿದ್ದರೆ ಇದನ್ನು ಪೂರೈಸುವುದು ಕಷ್ಟವೇ. ಮೀನು, ಮೊಟ್ಟೆ, ಮಾಂಸಗಳಂತಹ ಪ್ರಾಣಿಜನ್ಯ ಪ್ರೊಟೀನುಗಳು ಸುಲಭದಲ್ಲಿ ಜೀರ್ಣಗೊಂಡು ಸಂಪೂರ್ಣವಾಗಿ ಹೀರಲ್ಪಡುತ್ತವೆ. ಮಾಂಸಾಹಾರವು ನಮಗೆ ಅತ್ಯಗತ್ಯವಾದ ಎಲ್ಲಾ ಅಮೈನೋ ಆಮ್ಲಗಳನ್ನು ಒದಗಿಸುವುದರ ಜೊತೆಗೆ, ಕಬ್ಬಿಣ, ಸತು, ಬಿ-12 ಅನ್ನಾಂಗ ಇತ್ಯಾದಿ ಪೋಷಕಾಂಶಗಳನ್ನೂ ಒದಗಿಸುತ್ತದೆ. ಪ್ರಾಣಿಜನ್ಯ ಪ್ರೊಟೀನುಗಳು ನಮ್ಮ ದೇಹಕ್ಕೆ ಸುಲಭವಾಗಿ ಒಗ್ಗಿಕೊಂಡರೆ, ಸಸ್ಯಜನ್ಯ ಪ್ರೊಟೀನುಗಳಿಗೆ ಅಸಹಿಷ್ಣುತೆ (ಅಲರ್ಜಿ) ಉಂಟಾಗುವ ಸಾಧ್ಯತೆಗಳು ಹೆಚ್ಚು. ನಮ್ಮ ಮೆದುಳಿನ ಕೆಲಸಗಳು ಸಾಂಗವಾಗಿ ನಡೆಯುವುದಕ್ಕೂ, ರಕ್ತನಾಳಗಳ ಆರೋಗ್ಯವನ್ನು ಕಾಪಾಡುವುದಕ್ಕೂ ಮೀನಿನೆಣ್ಣೆಯ ಮೇದೋ ಆಮ್ಲಗಳು ಅತ್ಯಗತ್ಯವಾಗಿದ್ದು, ಅವು ಯಾವುದೇ ಸಸ್ಯಾಹಾರದಲ್ಲೂ ದೊರೆಯುವುದಿಲ್ಲ. ಇಷ್ಟೇ ಅಲ್ಲದೆ, ಪ್ರಾಣಿಜನ್ಯ ಮೇದಸ್ಸು ಹಾಗೂ ಪ್ರೊಟೀನುಗಳು ನಮಗೆ ಬೇಗನೇ ಸಂತೃಪ್ತಿಯನ್ನುಂಟು ಮಾಡಿ ಹಸಿವೆಯನ್ನು ನಿಯಂತ್ರಿಸುವಲ್ಲಿಯೂ ನೆರವಾಗುತ್ತವೆ.

ಮಾಂಸಾಹಾರದಿಂದ ರೋಗಗಳು ಹೆಚ್ಚುತ್ತವೆಯೇ? ಅದಕ್ಕೂ ಆಧಾರಗಳಿಲ್ಲ. ಮಧುಮೇಹ, ರಕ್ತದ ಏರೊತ್ತಡ, ಹೃದಯಾಘಾತ ಮುಂತಾದ ಕಾಹಿಲೆಗಳು ಸಸ್ಯಾಹಾರಿಗಳನ್ನೂ, ಮಾಂಸಾಹಾರಿಗಳನ್ನೂ ಸಮಾನವಾಗಿ ಬಾಧಿಸುತ್ತವೆ. ಎಲ್ಲರೂ ತಿನ್ನುವ ಸಕ್ಕರೆ, ಧಾನ್ಯಗಳು ಹಾಗೂ ಸಂಸ್ಕರಿತ ಆಹಾರಗಳೇ ಇದಕ್ಕೆ ಮುಖ್ಯ ಕಾರಣವೆನ್ನುವುದಕ್ಕೆ ಈಗ ಬಲವಾದ ಪುರಾವೆಗಳಿವೆ. ಆದ್ದರಿಂದ ಅಂತಹ ‘ಸಸ್ಯಾಹಾರದ’ ಬದಲಿಗೆ ಸಾಕಷ್ಟು ತರಕಾರಿಗಳನ್ನೂ, ಹಿತಮಿತವಾಗಿ ಮಾಂಸಾಹಾರವನ್ನೂ ಸೇವಿಸಿದರೆ ಆರೋಗ್ಯವಂತರಾಗಿರಲು ಸಾಧ್ಯವಿದೆ. ಈಗಲೂ ಕಾಡಿನೊಳಗೆ ಪ್ರಾಣಿಗಳು ಹಾಗೂ ಸೊಪ್ಪು-ಕಾಯಿಗಳನ್ನಷ್ಟೇ ತಿಂದು ಬದುಕುತ್ತಿರುವ ಆದಿವಾಸಿಗಳಲ್ಲಿ ಈ ಆಧುನಿಕ ರೋಗಗಳ ಸುಳಿವೇ ಇಲ್ಲವೆನ್ನುವುದು ಇದನ್ನು ಪುಷ್ಠೀಕರಿಸುತ್ತದೆ.

ಆದ್ದರಿಂದ ನಮ್ಮ ಶರೀರಧರ್ಮಕ್ಕೆ ಅನುಗುಣವಾದ, ಆರೋಗ್ಯಕ್ಕೆ ಪೂರಕವಾದ ಮಾಂಸಾಹಾರ ಸೇವನೆಗೆ ಜಾತಿ-ಧರ್ಮಗಳ ಹಂಗು ಅಡ್ಡಿಯಾಗದಿರಲಿ, ಈಗಾಗಲೇ ಪೌಷ್ಠಿಕತೆಯ ತೊಂದರೆಗಳಿಂದ ಬಳಲುತ್ತಿರುವ ನಮ್ಮ ಮಕ್ಕಳಿಗೆ ಚಾಕ್ಲೇಟು-ಬಿಸ್ಕತ್ತುಗಳ ಬದಲಿಗೆ ಮೀನು-ಮೊಟ್ಟೆಗಳು ಸಿಗುವಂತಾಗಲಿ. ’ಕೊಲ್ಲೆನಯ್ಯಾ ಪ್ರಾಣಿಗಳ, ಮೆಲ್ಲೆನಯ್ಯಾ ಬಾಯಿಚ್ಛೆಗೆ’ ಎಂದು ಸ್ವತಃ ಮಾಂಸಾಹಾರವನ್ನು ಇಚ್ಛಿಸದಿದ್ದರೂ, ನಾಯಿಮಾಂಸ ಸೇವಿಸುತ್ತಿದ್ದ ಶ್ವಪಚರನ್ನೂ, ‘ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ, ಬಾಯಲಿ ಸುರೆಯ ಗಡಿಗೆ’ ಹೊತ್ತಿದ್ದವರನ್ನೂ ತಿರಸ್ಕರಿಸದೆ, ‘ಕೊರಳಲಿ ದೇವರಿರಲು’ ಅವರಲ್ಲೂ ಶಿವಸ್ವರೂಪವನ್ನು ಕಂಡಿದ್ದ ನಮ್ಮ ನಾಡಿನ ಅತಿ ಶ್ರೇಷ್ಠ ದಾರ್ಶನಿಕ ಬಸವಣ್ಣನವರ ಉದಾರತೆ ಹಾಗೂ ಮಾನವೀಯ ಕಳಕಳಿಗಳು ಎಲ್ಲರಿಗೆ ದಾರಿ ತೋರಲಿ, ಸದ್ಬುದ್ಧಿಯನ್ನು ಕೊಡಲಿ.

ಮಕ್ಕಳ ದಿನದಂದೇ ಮಧುಮೇಹ ದಿನದ ವಿಪರ್ಯಾಸ

ಆರೋಗ್ಯ ಆಶಯ – ವಿಜಯ ಕರ್ನಾಟಕ: ಮಕ್ಕಳ ದಿನದಂದೇ ಮಧುಮೇಹ ದಿನದ ವಿಪರ್ಯಾಸ [ನವಂಬರ್ 14, 2012, ಬುಧವಾರ] [ನೋಡಿ | ನೋಡಿ]

ಇಂದಿನಿಂದ ಮಕ್ಕಳಿಗೆ ಸಿಹಿಯುಣಿಸುವುದನ್ನು ನಿಲ್ಲಿಸಿ, ಮಧುಮೇಹದಿಂದ ರಕ್ಷಿಸಿ

ಇಂದು ವಿಶ್ವ ಮಧುಮೇಹ ದಿನ, ನಮ್ಮಲ್ಲಿ ಮಕ್ಕಳ ದಿನವೂ ಹೌದು. ಮೇದೋಜೀರಕಾಂಗದಿಂದ ಇನ್ಸುಲಿನ್ ಹಾರ್ಮೋನನ್ನು ಪ್ರತ್ಯೇಕಿಸಿ, ಮಧುಮೇಹವುಳ್ಳವರಿಗೆ ಜೀವದಾಯಿಯಾದ ಫ್ರೆಡರಿಕ್ ಬಾಂಟಿಂಗ್ (1891) ಹಾಗೂ ನಮ್ಮ ಮಕ್ಕಳ ಭವಿಷ್ಯವು ಉಜ್ವಲವಾಗಿರಬೇಕೆಂದು ಬಯಸಿದ್ದ ಚಾಚಾ ನೆಹರೂ (1889) ಹುಟ್ಟಿದ ದಿನವಿದು. ಔಷಧ ಕಂಪೆನಿಗಳು ಕೊಟ್ಟ ಬಿಳಿ ಅಂಗಿ ಮತ್ತು ಪುಗ್ಗೆಗಳೊಂದಿಗೆ ಮುಖ್ಯ ರಸ್ತೆಗಳಲ್ಲಿ ಓಡಿ, ಕೊನೆಗೆ ಬಿಸ್ಕತ್ತು ತಿಂದು ಹಣ್ಣಿನ ರಸ ಕುಡಿದು ಮಧುಮೇಹ ನಿಯಂತ್ರಿಸುವ ಪಣ ತೊಡುವುದು ಒಂದೆಡೆ; ಸಿದ್ಧತಿನಿಸುಗಳ ಕಂಪೆನಿ ಕೊಟ್ಟ ಸಿಹಿ ಹಂಚಿ ಮಕ್ಕಳ ಭವಿಷ್ಯ ಬೆಳಗಲಿ ಎಂದು ಹಾರೈಸುವುದು ಇನ್ನೊಂದೆಡೆ. ವಿಪರ್ಯಾಸವೆಂದರೆ, ಭವಿಷ್ಯವನ್ನು ಸಂರಕ್ಷಿಸಿ ಎಂಬ ಧ್ಯೇಯವಾಕ್ಯವುಳ್ಳ ಮಧುಮೇಹ ಓಟದಲ್ಲಿ ಈ ವರ್ಷ ಮಕ್ಕಳೂ ಓಡುತ್ತಿದ್ದಾರೆ.

ಮಧುಮೇಹ ಉಂಟಾಗುವುದೇಕೆ? ನಾವು ತಿನ್ನುವ ವಿವಿಧ ಧಾನ್ಯಗಳು, ಚಮಚದ ಸಕ್ಕರೆ, ಹಣ್ಣುಗಳು ಮತ್ತಿತರ ಶರ್ಕರಗಳೆಲ್ಲವೂ ನಮ್ಮ ಕರುಳಲ್ಲಿ ಗ್ಲೂಕೋಸ್ ಯಾ ಫ್ರಕ್ಟೋಸ್ ಆಗಿ ಒಡೆದು ರಕ್ತವನ್ನು ಸೇರುತ್ತವೆ. ಮೇದೋಜೀರಕಾಂಗದ ಬಾಲದಲ್ಲಿರುವ ಬೀಟಾ ಕಣಗಳು ಸ್ರವಿಸುವ ಇನ್ಸುಲಿನ್ ಎಂಬ ಹಾರ್ಮೋನಿನ ನೆರವಿನಿಂದ ನಮ್ಮ ದೇಹವು ಗ್ಲೂಕೋಸನ್ನು ಬಳಸಿಕೊಳ್ಳುತ್ತದೆ; ಈ ವ್ಯವಸ್ಥೆಯು ಕೆಟ್ಟರೆ ರಕ್ತದ ಗ್ಲೂಕೋಸ್ ಪ್ರಮಾಣವು ಏರಿ, ಹಲವು ತೊಂದರೆಗಳಿಗೆ ಕಾರಣವಾಗುತ್ತದೆ. ಬೀಟಾಕಣಗಳು ಸಂಪೂರ್ಣವಾಗಿ ನಾಶಗೊಂಡು ಇನ್ಸುಲಿನ್ ಇಲ್ಲದೇ ಬದುಕಲಾಗದಂತಹ ಸ್ಥಿತಿಯನ್ನು ಒಂದನೇ ವಿಧದ ಮಧುಮೇಹ ಎನ್ನುತ್ತೇವೆ. ಬೀಟಾ ಕಣಗಳ ಸಾಮರ್ಥ್ಯವು ಕಡಿಮೆಯಾಗಿ ಅಥವಾ ಇನ್ಸುಲಿನ್ ಕೆಲಸಕ್ಕೆ ಅಡ್ಡಿಯಾಗಿ ಗ್ಲೂಕೋಸ್ ಬಳಕೆಗೆ ತೊಂದರೆಯಾಗುವುದನ್ನು ಎರಡನೇ ವಿಧದ ಮಧುಮೇಹ ಎನ್ನಲಾಗುತ್ತದೆ.

ಇಂದು ವಿಶ್ವದಾದ್ಯಂತ 34 ಕೋಟಿಯಷ್ಟು (ಭಾರತದಲ್ಲಿ ಆರು ಕೋಟಿಗೂ ಹೆಚ್ಚು) ಮಧುಮೇಹ ಪೀಡಿತರಿದ್ದು, ಅವರಲ್ಲಿ ಶೇ. 90-95ರಷ್ಟು ಎರಡನೇ ವಿಧದ ಮಧುಮೇಹವನ್ನೇ ಹೊಂದಿದ್ದಾರೆ. ಈ ಸಂಖ್ಯೆಯು ಒಂದೇ ಸವನೆ ಏರುತ್ತಿದ್ದು, ಮುಂದಿನ 10-15 ವರ್ಷಗಳಲ್ಲಿ ದುಪ್ಪಟ್ಟಾಗಬಹುದೆಂದು ಅಂದಾಜಿಸಲಾಗಿದೆ. ಮೂರ್ನಾಲ್ಕು ದಶಕಗಳ ಹಿಂದೆ 50-60ರ ವಯಸ್ಸಿನಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ಎರಡನೇ ವಿಧದ ಮಧುಮೇಹವು ನಂತರದಲ್ಲಿ 20-40ರಲ್ಲೇ ಗೋಚರಿಸಲಾರಂಭಿಸಿ, ಕಳೆದೊಂದು ದಶಕದಿಂದ 8-10 ವರ್ಷದ ಮಕ್ಕಳಲ್ಲೂ ಉಂಟಾಗುತ್ತಿದೆ; ಕಳೆದ ದಶಕದಲ್ಲಿ ಅಂತಹಾ ಮಕ್ಕಳ ಸಂಖ್ಯೆಯು 10-30 ಪಟ್ಟು ಹೆಚ್ಚಾಗಿದೆ. ಮೊದಲೆಲ್ಲ ಸ್ಥಿತಿವಂತರಲ್ಲೇ ಹೆಚ್ಚಾಗಿದ್ದ ಈ ಕಾಹಿಲೆ ಇಂದು ಕೆಳ ಮಧ್ಯಮ ವರ್ಗದವರನ್ನೂ ಕಾಡತೊಡಗಿದೆ. ಎಪ್ಪತ್ತರ ದಶಕದಲ್ಲಿ ಶೇ. 3ರಷ್ಟು ನಗರವಾಸಿಗಳಲ್ಲಿ ಮಧುಮೇಹವಿದ್ದರೆ, ಇಂದು ಶೇ. 10-20ರಷ್ಟು ನಗರವಾಸಿಗಳಲ್ಲೂ, ಶೇ. 2-8ರಷ್ಟು ಗ್ರಾಮೀಣ ವಾಸಿಗಳಲ್ಲೂ ಕಂಡುಬರುತ್ತಿದೆ. ಹೀಗಾಗುವುದಕ್ಕೆ ವಂಶವಾಹಿಗಳಿಂದ ಹಿಡಿದು, ಕೆಲಸದ ಒತ್ತಡ ಹಾಗೂ ಸಂಚಾರ ಮಾಲಿನ್ಯಗಳವರೆಗೆ ಹಲವಾರು ಕಾರಣಗಳನ್ನು ನೀಡಲಾಗುತ್ತಿದ್ದು, ಅವುಗಳಿಗೆ ಹೆಚ್ಚೇನೂ ಮಾಡಲಾಗದೆಂದು ಚಿಕಿತ್ಸೆಗೇ ಒತ್ತು ಕೊಡಲಾಗುತ್ತಿದೆ.

ಮಧುಮೇಹ, ಬೊಜ್ಜು, ಹೃದ್ರೋಗ ಇವೇ ಮುಂತಾದ ಆಧುನಿಕ ರೋಗಗಳು ಇಷ್ಟೊಂದು ಹೆಚ್ಚುತ್ತಿರುವುದಕ್ಕೆ ನಿಜವಾದ ಕಾರಣಗಳೇನೆನ್ನುವುದು ತಿಳಿದರೆ ಇವನ್ನೆಲ್ಲ ತಡೆಯುವುದು ಸುಲಭವಾದೀತು. ನಾವಿಂದು ಪ್ರಕೃತಿಯ ಮಡಿಲನ್ನು ಬಿಟ್ಟು ಕಾಂಕ್ರೀಟು ಕಾಡುಗಳನ್ನು ಕಟ್ಟಿಕೊಂಡು, ನಿಸರ್ಗದತ್ತವಾದ ಜೀವಭರಿತ ಆಹಾರಗಳ ಬದಲಿಗೆ ಕಾರ್ಖಾನೆದತ್ತವಾದ ಜೀವರಹಿತ, ಸಂಸ್ಕರಿತ ವಸ್ತುಗಳನ್ನು ಸೇವಿಸುತ್ತಿರುವುದೇ ಈ ಎಲ್ಲಾ ರೋಗಗಳಿಗೆ ಕಾರಣವೆನ್ನುವುದಕ್ಕೆ ಬಲವಾದ ಪುರಾವೆಗಳು ಇದೀಗ ಲಭ್ಯವಾಗುತ್ತಲಿವೆ, ನಮ್ಮ ದೇಹ ಪ್ರಕೃತಿ ಬದಲಾಗದೆ ಪ್ರವೃತ್ತಿಯಷ್ಟೇ ಬದಲಾಗಿರುವುದರ ಗಂಭೀರತೆಯು ಅರ್ಥವಾಗತೊಡಗಿದೆ. ನಮ್ಮ ದೇಹವು ನಿಸರ್ಗದತ್ತವಾದ ಆಹಾರವನ್ನು ಬಳಸಿಕೊಳ್ಳುವುದಕ್ಕೆಂದೇ ರೂಪುಗೊಂಡಿದ್ದು, ನಮ್ಮ ಅಸ್ತಿತ್ವದ ಎರಡು ಲಕ್ಷ ವರ್ಷಗಳ ಅವಧಿಯುದ್ದಕ್ಕೂ ಬೇಟೆಗೆ ಸಿಕ್ಕ ಪ್ರಾಣಿ-ಪಕ್ಷಿಗಳು, ಅಲೆದು ಹುಡುಕಿದ ಹಲಬಗೆಯ ಸಸ್ಯಗಳು ಹಾಗೂ ಬೀಜಗಳು, ಅಪರೂಪಕ್ಕೊಮ್ಮೆ ದೊರೆಯುತ್ತಿದ್ದ ಕಾಡಿನ ಹಣ್ಣುಗಳು ಹಾಗೂ ಬೇರೇನೂ ದೊರೆಯದಾಗ ಅಗೆದು ತೆಗೆಯುತ್ತಿದ್ದ ಗೆಡ್ಡೆಗಳೇ ನಮ್ಮ ಆಹಾರಗಳಾಗಿದ್ದವು. ಆದರೆ ಸುಮಾರು ಹತ್ತು ಸಾವಿರ ವರ್ಷಗಳಿಂದೀಚೆಗೆ ನಾವು ಧಾನ್ಯಗಳನ್ನು ಬೆಳೆಯತೊಡಗಿದ ಬಳಿಕ ಅವೇ ನಮ್ಮ ಮುಖ್ಯ ಆಹಾರಗಳಾಗಿಬಿಟ್ಟವು. ಕಾಲಕ್ರಮೇಣ ಈ ಧಾನ್ಯಗಳನ್ನು ಪುಡಿಗಟ್ಟಿ ತಯಾರಿಸಿದ ಬ್ರೆಡ್ಡು ಇತ್ಯಾದಿಗಳನ್ನು ತಿನ್ನತೊಡಗಿ, ಈಗ ಅವುಗಳೇ ನಮ್ಮ ನಿತ್ಯಾಹಾರಗಳಾಗಿಬಿಟ್ಟಿವೆ. ಧಾನ್ಯಗಳು, ಸಕ್ಕರೆ, ಹಣ್ಣಿನ ರಸಗಳು ಹಾಗೂ ಆಕಳ ಹಾಲಿನಿಂದಲೇ ಸಿದ್ಧಗೊಳ್ಳುವ ಇಂದಿನ ಆಧುನಿಕ ತಿನಿಸುಗಳು ನಮ್ಮ ಪ್ರಾಚೀನ ಶರೀರಕ್ಕೆ ಒಗ್ಗದೆ, ನಮ್ಮ ಪಚನಾಂಗದ ಸೂಕ್ಷ್ಮ ಪ್ರಕ್ರಿಯೆಗಳನ್ನು, ಪಚನಾಂಗ ಮತ್ತು ಮೆದುಳಿನ ನಡುವಿನ ಸಂವಹನವನ್ನು, ಹಸಿವು-ಸಂತೃಪ್ತಿಗಳ ನಿಯಂತ್ರಣವನ್ನು ಹಾಗೂ ಸಂಕೀರ್ಣವಾದ ಉಪಾಪಚಯವನ್ನು ಕೆಡಿಸಿ ರೋಗಗಳಿಗೆ ಕಾರಣವಾಗುತ್ತಿವೆ. ಅಗತ್ಯಕ್ಕಿಂತ ಹೆಚ್ಚು ತಿಂದ ಸಕ್ಕರೆಯು ಮೇದಸ್ಸಾಗಿ ಪರಿವರ್ತನೆಗೊಂಡು ಉದರ, ಯಕೃತ್ತು, ಸ್ನಾಯುಗಳು, ಹೃದಯ, ರಕ್ತನಾಳಗಳು, ಮೇದೋಜೀರಕಾಂಗ ಮುಂತಾದೆಡೆ ಶೇಖರಗೊಳ್ಳುವುದರಿಂದ ಬೊಜ್ಜು, ರಕ್ತನಾಳಗಳ ಖಾಯಿಲೆ ಇತ್ಯಾದಿ ಉಂಟಾಗುವುದಲ್ಲದೆ, ಇನ್ಸುಲಿನ್ ಹಾರ್ಮೋನಿನ ಕೆಲಸಕ್ಕೂ ಅಡ್ಡಿಯುಂಟಾಗಿ, ಕೊನೆಗೆ ಅದರ ವೈಫಲ್ಯಕ್ಕೂ, ಎರಡನೇ ವಿಧದ ಮಧುಮೇಹಕ್ಕೂ ಕಾರಣವಾಗುತ್ತಿದೆ.

ಇಂತಹ ಆಧುನಿಕ ತಿನಿಸುಗಳು ನಮ್ಮ ಪಚನಾಂಗದೊಳಗಿರುವ ಬ್ಯಾಕ್ಟೀರಿಯಾಗಳ ಸಮತೋಲನವನ್ನೂ ಏರುಪೇರು ಮಾಡುತ್ತವೆ. ನಮ್ಮ ಬಾಯಿಯಲ್ಲೂ, ದೊಡ್ಡ ಕರುಳಿನಲ್ಲೂ 500ಕ್ಕೂ ಹೆಚ್ಚು ವಿಧದ ಬ್ಯಾಕ್ಟೀರಿಯಾಗಳು ಲಕ್ಷ ಕೋಟಿಗಟ್ಟಲೆ ಸಂಖ್ಯೆಯಲ್ಲಿದ್ದು, ಅಲ್ಲಿನ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ ಶರ್ಕರಪಿಷ್ಠಗಳನ್ನು ಜೀರ್ಣಿಸುವಲ್ಲಿಯೂ ನೆರವಾಗುತ್ತವೆ. ಈ ಬ್ಯಾಕ್ಟೀರಿಯಾಗಳು ಸರಿಯಾಗಿರಬೇಕಾದರೆ ಸೊಪ್ಪು-ತರಕಾರಿಗಳಂತಹ ಜೀವಂತ ಶರ್ಕರಗಳನ್ನೇ ನಾವು ಸೇವಿಸಬೇಕು; ಜೀವವಿಲ್ಲದ ಸಂಸ್ಕರಿತ ತಿನಿಸುಗಳನ್ನೂ, ಸಕ್ಕರೆಭರಿತವಾದ ತಿನಿಸುಗಳನ್ನೂ ಸೇವಿಸುವುದರಿಂದ ರೋಗಕಾರಕ ಬ್ಯಾಕ್ಟೀರಿಯಾಗಳು ಬೆಳೆದು, ದೇಹದಲ್ಲಿ ಉರಿಯೂತವನ್ನು ಹೆಚ್ಚಿಸಿ ಬೊಜ್ಜು, ಮಧುಮೇಹ ಮುಂತಾದ ಕಾಯಿಲೆಗಳಿಗೆ ಕಾರಣವಾಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಒಂದನೇ ವಿಧದ ಮಧುಮೇಹವೂ ಹೆಚ್ಚುತ್ತಿದ್ದು, ವೈರಾಣುಗಳ ಸೋಂಕಷ್ಟೇ ಅಲ್ಲದೆ ಶಿಶುವಿಗೆ ಆರು ತಿಂಗಳಾಗುವ ಮೊದಲೇ ದನದ ಹಾಲನ್ನು ನೀಡುವುದು ಹಾಗೂ ಗೋಧಿಯನ್ನು ಬೇಗನೇ ಕೊಡಲಾರಂಭಿಸುವುದು ಬೀಟಾ ಕಣಗಳ ನಾಶಕ್ಕೆ ಕಾರಣಗಳಾಗಿರಬಹುದೆಂದು ಹೇಳಲಾಗಿದೆ.

ಜನಸಮುದಾಯಗಳ ಆಹಾರ ಪದ್ಧತಿಯನ್ನೂ, ಆಧುನಿಕ ರೋಗಗಳ ಇರುವಿಕೆಯನ್ನೂ ಹೋಲಿಸಿದರೆ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ. ಮೂರ್ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಬ್ರೆಡ್ಡು ಮುಂತಾದ ಸಂಸ್ಕರಿತ ಆಹಾರಗಳನ್ನು ತಿನ್ನಲಾರಂಭಿಸಿದ್ದ ಈಜಿಪ್ಷಿಯನರ ಮಮ್ಮಿಗಳಲ್ಲಿ ಆಧುನಿಕ ರೋಗಗಳ ಕುರುಹುಗಳನ್ನು ಗುರುತಿಸಲಾಗಿದ್ದರೆ, ಇಂದಿಗೂ ಜಗತ್ತಿನ ವಿವಿಧೆಡೆಗಳಲ್ಲಿ ಆಧುನಿಕತೆಯ ಸೋಂಕಿಲ್ಲದೆ, ನಿಸರ್ಗದತ್ತವಾದ ಸೊಪ್ಪು, ಮೀನು, ಮಾಂಸಗಳನ್ನಷ್ಟೇ ತಿಂದು ಬದುಕುತ್ತಿರುವ ಇನ್ನೂರಕ್ಕೂ ಹೆಚ್ಚು ಮೂಲನಿವಾಸಿ ಸಮುದಾಯಗಳಲ್ಲಿ ಇಂತಹಾ ರೋಗಗಳ ಕುರುಹೇ ಇಲ್ಲವೆಂದು ಅಧ್ಯಯನಗಳು ತೋರಿಸಿವೆ. ನಾವಂತೂ ಸಕ್ಕರೆ, ಧಾನ್ಯಗಳು, ಹಾಲು ಮತ್ತು ಹಣ್ಣುಗಳಿಂದ ಸಿದ್ಧಪಡಿಸಿದ ವಸ್ತುಗಳನ್ನೇ ತಿನ್ನಬೇಕಾದಂತಹ ಪ್ರಮೇಯಕ್ಕೆ ಸಿಲುಕಿದ್ದು, ಪ್ರತೀ ಮನೆಯಲ್ಲೂ ಒಂದಿಲ್ಲೊಂದು ರೋಗವುಳ್ಳವರನ್ನು ಹೊಂದಿರುವಂತಾಗಿದೆ. ದೊಡ್ಡವರು ತಿನ್ನುವಷ್ಟೇ ಗಾತ್ರದ ಐಸ್ ಕ್ರೀಂ, ಚಾಕಲೇಟು, ಪೇಯಗಳು, ಹಣ್ಣಿನ ರಸಗಳನ್ನೆಲ್ಲ ಮಕ್ಕಳಿಗೂ ತಿನ್ನಿಸುತ್ತಿರುವುದರಿಂದ. ಹಿಂದೆ 50-60 ವರ್ಷಗಳಲ್ಲಿ ಒಬ್ಬಾತ ತಿನ್ನುತ್ತಿದ್ದ ಶರ್ಕರಗಳ ಒಟ್ಟು ಪ್ರಮಾಣವನ್ನು ಇಂದಿನ ಮಕ್ಕಳು 8-10 ವರ್ಷಗಳಲ್ಲೇ ತಿನ್ನುವಂತಾಗಿ, ಮಕ್ಕಳೂ ಆಧುನಿಕ ರೋಗಗಳಿಗೆ ತುತ್ತಾಗುವಂತಾಗಿದೆ. ಹೀಗೆ, ಕಳೆದ ಶತಮಾನದ ಆರಂಭದಲ್ಲಿ ತಲಾವಾರು ಸಕ್ಕರೆಯ ಬಳಕೆಯು ವರ್ಷಕ್ಕೆ 20 ಕಿಲೋಗಳಿಷ್ಟಿದ್ದಾಗ ಲಕ್ಷಕ್ಕೆ ಮೂವರಲ್ಲಿ ಮಧುಮೇಹವಿದ್ದರೆ, ಈ ಶತಮಾನದ ಆರಂಭಕ್ಕೆ ಅದು 50 ಕಿಲೋಗಳಷ್ಟಾಗಿ, ಲಕ್ಷಕ್ಕೆ 8000 ಜನರಲ್ಲಿ ಮಧುಮೇಹವಿರುವಂತಾಗಿದೆ.

ಹುಟ್ಟಿದಂದಿನಿಂದಲೇ ಅನೈಸರ್ಗಿಕವಾದ ತಿನಿಸುಗಳನ್ನು ಅನಿಯಂತ್ರಿತವಾಗಿ ತಿನ್ನುತ್ತಿರುವುದೇ ಆಧುನಿಕ ರೋಗಗಳಿಗೆ ಅತಿ ಮುಖ್ಯವಾದ ಕಾರಣವಾಗಿರುವುದರಿಂದ ಅವುಗಳಿಗೆ ಕಡಿವಾಣ ಹಾಕಬೇಕೆಂದು ಹತ್ತು ವರ್ಷಗಳ ಹಿಂದೆಯೇ ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ (ಸಂ. 916) ಎಚ್ಚರಿಸಲಾಗಿದ್ದರೂ, ಸಕ್ಕರೆ ಉದ್ಯಮ, ಲಘು ಪೇಯಗಳ ತಯಾರಕರು ಹಾಗೂ ಅಮೆರಿಕಾದ ಆಡಳಿತದ ಬೆದರಿಕೆಯಿಂದಾಗಿ ಅದು ಮೂಲೆ ಸೇರಿದೆ. ಸಕ್ಕರೆ ತಿಂದರೆ ಸಕ್ಕರೆ ಕಾಹಿಲೆ ಬರದೆಂದು ಸುಳ್ಳು ಹೇಳುತ್ತಾ, ಸಕ್ಕರೆಯನ್ನು ಭರ್ಜರಿಯಾಗಿ ಮಾರುವುದೂ, ಅದರಿಂದ ಬರುವ ರೋಗಗಳಿಗಾಗಿ ಮಹಾ ಆಸ್ಪತ್ರೆಗಳನ್ನು ಕಟ್ಟುವುದೂ ಮುಂದುವರಿದಿವೆ. ಆದ್ದರಿಂದ ನಮ್ಮ ಹಾಗೂ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಆಧುನಿಕತೆಯಿಂದ ಪ್ರಾಚೀನತೆಗೆ ನಾವಾಗಿ ಪಥ್ಯಾಂತರ ಮಾಡಬೇಕಾಗಿದೆ. ಇಂದಿನಿಂದ ಮಕ್ಕಳಿಗೆ ಎಲ್ಲಾ ಸಿಹಿಯುಳ್ಳ, ಸಂಸ್ಕರಿತ ತಿನಿಸುಗಳನ್ನು ನಿರ್ಬಂಧಿಸಿ, ತರಕಾರಿಗಳು, ಮೊಳೆತ ಕಾಳುಗಳು, ಬೀಜಗಳು, ಮೀನು, ಮಾಂಸ, ಮೊಟ್ಟೆಗಳಂತಹ ಮನುಷ್ಯ ಸಹಜ ಆಹಾರವನ್ನು ನೀಡುವ ಮೂಲಕ ಅವರು ಮಧುಮೇಹ ದಿನದಲ್ಲಿ ಭಾಗಿಗಳಾಗುವ ದುರಂತವನ್ನು ತಪ್ಪಿಸೋಣ.

ಆರಿದ ಬಾಯಿಗಳಿಗೆ ಎಲ್ಲಿದೆ ಸಾಂತ್ವನ?

ಆರೋಗ್ಯ ಆಶಯ – ವಿಜಯ ಕರ್ನಾಟಕ: ಆರಿದ ಬಾಯಿಗಳಿಗೆ ಎಲ್ಲಿದೆ ಸಾಂತ್ವನ? [ಮಾರ್ಚ್ 20, 2013, ಬುಧವಾರ] [ನೋಡಿ | ನೋಡಿ]

ಎಲ್ಲಾ ಜೀವಿಗಳ ಕಣಕಣದಲ್ಲೂ ಇರುವ ನೀರು ವ್ಯಾಪಾರದ ಸರಕಾಗಬಾರದು

ಅನಂತಾನಂತವಾದ ಈ ತಾರಾಮಂಡಲದಲ್ಲಿ ಭೂಮಿಯಂತಹ ಕೆಲ ಗ್ರಹಗಳಲ್ಲಷ್ಟೇ ನೀರಿರುವುದು, ಅಲ್ಲಷ್ಟೇ ಜೀವರಾಶಿಯಿರುವುದು. ನಮ್ಮ ದೇಹದೊಳಗೆ ನೀರಿನಂಶ ನೂರಕ್ಕೆ ಅರುವತ್ತರಷ್ಟು. ಯಾವ ಭೂಮಿಯಲ್ಲಿ ನೀರಿನಿಂದ ಜೀವಸಂಕುಲ ಬೆಳೆಯಿತೋ, ಅಲ್ಲೀಗ ಅದೇ ನೀರಿಗೆ ತತ್ವಾರ. ಅಂದಾಜಿನಂತೆ ಇನ್ನು ಹದಿನೈದೇ ವರ್ಷಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಏರುತ್ತಿರುವ ಬೇಡಿಕೆ, ಕ್ಷೀಣಿಸುತ್ತಿರುವ ಜಲಸಂಪನ್ಮೂಲಗಳ ಜೊತೆಗೆ ದುರ್ಬಲಗೊಳ್ಳುತ್ತಿರುವ ಜಲ ಸಂಗ್ರಹಣೆ, ಶೇಖರಣೆ ಹಾಗೂ ವಿತರಣೆ. ಜೀವದ ಹಕ್ಕಾದ ನೀರಿಗೂ ಗಂಟೆಗಟ್ಟಲೆ ನಿದ್ದೆಗೆಟ್ಟು ಕಾದು, ದುಡ್ಡು ಕೊಟ್ಟು ಬೇಡುವ ದುರವಸ್ಥೆ.

ಭೂಮಿಯ ಶೇ. 70 ಭಾಗ ಜಲಾವೃತವಾಗಿದ್ದರೂ, ಅದರಲ್ಲಿ ಸಿಹಿ ನೀರು ಶೇ. 3 ಮಾತ್ರ. ಅದರಲ್ಲೂ ಹಿಮದೊಳಗೂ, ಆಳ ನೆಲದೊಳಗೂ ಹುದುಗಿರುವ ನೀರು ದೊರೆಯುವಂತಿಲ್ಲ. ಸಿಕ್ಕಿದ್ದರಲ್ಲಿ ಕೃಷಿ ಹಾಗೂ ಹೈನುಗಾರಿಕೆಗೆ ಶೇ. 70 ಹಾಗೂ ಉದ್ದಿಮೆಗಳಿಗೆ ಶೇ. 10 ರಷ್ಟು ಬಳಕೆಯಾಗಿ ನಮಗುಳಿಯುವುದು ತೀರಾ ಅಲ್ಪ. ಜಲಸಂಪನ್ಮೂಲಗಳು ವಿರಳವಾದಂತೆ ತಲಾವಾರು ನೀರಿನ ಪೂರೈಕೆಯೂ ಇಳಿಯುತ್ತಲಿದೆ: ನಮ್ಮ ದೇಶದಲ್ಲಿ 1955ರಲ್ಲಿ ಪ್ರತಿಯೋರ್ವನಿಗೂ ವರ್ಷಕ್ಕೆ 5300 ಘನ ಅಡಿಯಷ್ಟು ನೀರು ದೊರೆಯುತ್ತಿದ್ದರೆ, 1996ಕ್ಕೆ ಅದು 2200 ಘನ ಅಡಿಯಷ್ಟಾಗಿದೆ; 2020ಕ್ಕೆ 1600 ಕ್ಕಿಳಿದು ನೀರಿನ ಸಂಕಟ ಉತ್ಕಟವಾಗಲಿದೆ. ನಮ್ಮಲ್ಲಿ ಶೇ. 80ಕ್ಕೂ ಹೆಚ್ಚು ಜನ ಅಂತರ್ಜಲವನ್ನೇ ನೆಚ್ಚಿಕೊಂಡಿದ್ದು, ಅದೀಗ ಬರಿದಾಗುತ್ತಿರುವುದಷ್ಟೇ ಅಲ್ಲ, ಮಲಿನವೂ ಆಗುತ್ತಿದೆ. ಜೀವಜಲ ಬಾಯಿಗೆಟಕುತ್ತಿಲ್ಲ, ಸಿಕ್ಕರೂ ಕುಡಿಯುವಂತಿಲ್ಲ.

ಮನುಷ್ಯನ ಚಟುವಟಿಕೆಗಳ ಹೊಲಸೆಲ್ಲವೂ ಕೆರೆ-ತೊರೆ-ನದಿಗಳಿಂದ ಸಾಗರಗಳವರೆಗೂ, ಭೂಮಿಯ ಮೇಲ್ಮೈಯಿಂದ ಆಗಸ-ಭೂತಳಗಳಿಗೂ ಸೋರಿ ಹೋಗುತ್ತಿವೆ, ಜೀವಜಲ ಕಲುಷಿತಗೊಂಡು ಮರಣಜಲವಾಗುತ್ತಿದೆ. ಮನುಷ್ಯರು ಹಾಗೂ ಸಾಕುಪ್ರಾಣಿಗಳ ಮಲಮೂತ್ರಗಳು ಹಾಗೂ ಬಚ್ಚಲ ಕೊಳೆಗಳು, ಕೈಗಾರಿಕೆಗಳಿಂದ ವಿಸರ್ಜಿಸಲ್ಪಡುವ ರಾಸಾಯನಿಕಗಳು, ಕೃಷಿಯಲ್ಲಿ ಬೇಕಾಬಿಟ್ಟಿ ಬಳಕೆಯಾಗುವ ರಸಗೊಬ್ಬರಗಳು ಹಾಗೂ ಕೀಟನಾಶಕಗಳು, ಭೂಮಿಯೊಳಕ್ಕೋ, ಸಾಗರದೊಳಕ್ಕೋ ಸುರಿಯುವ ಬಗೆಬಗೆಯ ತ್ಯಾಜ್ಯಗಳೆಲ್ಲವೂ ನಾವು ಕುಡಿಯುವ ನೀರಿನೊಂದಿಗೆ ಬೆರೆಯುತ್ತಿವೆ. ಹವಾಮಾನದ ವೈಪರೀತ್ಯಗಳು ಕೆರೆ-ನದಿ-ಸಾಗರಗಳ ನೀರಿನ ಮಟ್ಟದ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲದೆ, ನೀರಿನ ಉಷ್ಣತೆ, ಅದರಲ್ಲಿರುವ ರಾಸಾಯನಿಕಗಳು ಹಾಗೂ ಸೂಕ್ಷ್ಮಾಣುಗಳ ಪ್ರಮಾಣಗಳ ಮೇಲೂ ಪರಿಣಾಮ ಬೀರುತ್ತಿವೆ. ಒಟ್ಟಿನಲ್ಲಿ ಜೀವನದ ಪ್ರತಿ ಸ್ತರದಲ್ಲೂ ದುಡ್ಡನ್ನಷ್ಟೇ ಎಣಿಸುತ್ತಿರುವ ಮನುಕುಲಕ್ಕೆ ತನ್ನ ಅಸ್ತಿತ್ವದ ಲೆಕ್ಕಾಚಾರವೇ ತಪ್ಪಿ ಹೋಗುತ್ತಿದೆ.

ಕುಡಿಯುವುದಕ್ಕೆ ಶುದ್ಧ ನೀರನ್ನೊದಗಿಸುವ 122 ದೇಶಗಳ ಪಟ್ಟಿಯಲ್ಲಿ ನಾವು 120 ರಲ್ಲಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಹಾಗೂ ಸ್ವಚ್ಛತೆಗಾಗಿ ಹನ್ನೊಂದು ಪಂಚವಾರ್ಷಿಕ ಯೋಜನೆಗಳಲ್ಲಿ 135000 ಕೋಟಿ ರೂಪಾಯಿ ವ್ಯಯಿಸಿದ್ದರೂ ಜಲಜನ್ಯ ರೋಗಗಳಿಂದಾಗಿ ಪ್ರತೀ ವರ್ಷ ಸುಮಾರು 36000 ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಮೂಲೆ-ಮೂಲೆಗಳಲ್ಲಿ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತಿರುವ ನಮ್ಮಲ್ಲಿ ಎಪ್ಪತ್ತು ಕೋಟಿ ಜನರಿಗೆ ಶೌಚಾಲಯಗಳಿಲ್ಲದೆ ಪ್ರತಿ ದಿನ 20000 ಟನ್ನುಗಳಷ್ಟು ಮಲವು ಬಯಲಲ್ಲೇ ವಿಸರ್ಜಿಸಲ್ಪಟ್ಟು ಕುಡಿಯುವ ನೀರಿನ ಮೂಲಗಳನ್ನೂ, ಪುಣ್ಯತೀರ್ಥಗಳನ್ನೂ ಸೇರುತ್ತಿವೆ. ಶೌಚಾಲಯಕ್ಕಿಂತ ಮೊಬೈಲ್ ಫೋನ್ ಆದ್ಯತೆಯಾಗಿ, ಬಯಲ ಕಡೆ ವಿಸರ್ಜಿಸುವಾಗಲೂ ಅದನ್ನು ಕಿವಿಗೊತ್ತಲಾಗುತ್ತಿದೆ. ಬಯಲು ವಿಸರ್ಜನೆಯಿಂದ ಕಲುಷಿತಗೊಳ್ಳುವ ನೀರಿನಿಂದ ವಾಂತಿ-ಬೇಧಿ, ಹೆಪಟೈಟಿಸ್ ಎ ಮತ್ತು ಇ (ಕಾಮಾಲೆ), ಟೈಫಾಯ್ಡ್ ಜ್ವರ, ಎಂಟಮೀಬಾ ಹಾಗೂ ಜಿಯಾರ್ಡಿಯಾ ಆಮಶಂಕೆ, ಜಂತುಬಾಧೆ ಮುಂತಾದ ರೋಗಗಳುಂಟಾಗಿ ಪ್ರತೀ ವರ್ಷ ನಾಲ್ಕು ಕೋಟಿ ಭಾರತೀಯರು ಬಳಲುತ್ತಾರೆ, ಹದಿನೈದು ಲಕ್ಷ (ದಿನವೊಂದಕ್ಕೆ 5000) ಮಕ್ಕಳು ಬೇಧಿಯಿಂದಾಗಿ ಸಾವನ್ನಪ್ಪುತ್ತಾರೆ. ಪದೇ ಪದೇ ಇಂತಹಾ ರೋಗಗಳು ತಗಲುವುದರಿಂದ ಮಕ್ಕಳಲ್ಲಿ ಕುಪೋಷಣೆಗೂ, ಕುಂಠಿತ ಬೌದ್ಧಿಕ-ದೈಹಿಕ ಬೆಳವಣಿಗೆಗಳಿಗೂ ಕಾರಣವಾಗುತ್ತಿದೆ. ದೇಶದ ಕೆಲ ಭಾಗಗಳಲ್ಲಿ ಅಂತರ್ಜಲದಲ್ಲಿ ಬೆರೆತಿರುವ ಫ್ಲೋರೈಡ್, ಆರ್ಸೆನಿಕ್, ಕಬ್ಬಿಣ ಇತ್ಯಾದಿ ಲೋಹಾಂಶಗಳೂ ಕಾಹಿಲೆಗಳಿಗೆ ಕಾರಣವಾಗುತ್ತಿವೆ.

ನಾಗರಿಕರಿಗೆ ನಿರಂತರವಾಗಿ ಶುದ್ಧ ಕುಡಿಯುವ ನೀರನ್ನೊದಗಿಸುವಲ್ಲಿಯೂ, ವಿಸರ್ಜಿತ ಕಶ್ಮಲಗಳನ್ನು ಸರಿಯಾಗಿ ನಿಭಾಯಿಸುವಲ್ಲಿಯೂ ಹೆಚ್ಚಿನ ಪೌರಾಡಳಿತಗಳು ವಿಫಲವಾಗಿರುವುದು ಖಾಸಗಿ ದಂಧೆಗೆ ಹೆದ್ದಾರಿಯನ್ನೇ ತೆರೆದಿದೆ. ನೀರಿನ ಬಾಟಲು-ಪೊಟ್ಟಣಗಳ ಭರ್ಜರಿ ಮಾರಾಟದ ಜೊತೆಗೆ, ನೀರನ್ನು ಶುದ್ಧೀಕರಿಸುವ ಸಾಧನಗಳ ವ್ಯಾಪಾರವೂ ಭರಾಟೆಯಿಂದ ನಡೆಯುತ್ತಿದೆ. ನಾಲ್ಕು ದಶಕಗಳ ಹಿಂದೆ ಯಾರೂ ಗಂಭೀರವಾಗಿ ಪರಿಗಣಿಸದಿದ್ದ ಬಾಟಲು ನೀರಿನ ಉದ್ದಿಮೆ ಇಂದು ಲಕ್ಷ ಕೋಟಿಗಟ್ಟಲೆಯ ವಹಿವಾಟಾಗಿ ಬೆಳೆದಿದೆ. ಈ ಬಾಟಲಿಯ ನೀರೊಳಗೆ ಇಂದಿನ ಅರ್ಥವ್ಯವಸ್ಥೆಯ ಪ್ರತಿಬಿಂಬವಿದೆ: ಎಲ್ಲರಿಗೂ ಉಚಿತವಾಗಿ ಸಿಗಬೇಕಾದ ಅತ್ಯಮೂಲ್ಯ ಪ್ರಾಕೃತಿಕ ಸಂಪನ್ಮೂಲವಾದ ನೀರು, ಅದನ್ನು ಕಟ್ಟುವುದಕ್ಕೆ ಅಷ್ಟೇ ಅಮೂಲ್ಯವಾದ ನೈಸರ್ಗಿಕ ತೈಲದಿಂದ ತೆಗೆದ ಪಾಲಿಎಥಿಲೀನ್ ಟೆರಿಫ್ಥಾಲೇಟ್ (ಪಿಇಟಿ) ಬಾಟಲು, ಅದನ್ನು ಮಾರುವುದಕ್ಕೆ ದೊಡ್ಡ ತಾರೆಯರ ಜಾಹೀರಾತುಗಳು, ಇಡೀ ಬ್ರಹ್ಮಾಂಡದಲ್ಲಿ ಏಕರೂಪದಲ್ಲಿರುವ ನೀರು ಈ ಬಾಟಲುಗಳಲ್ಲಿ ಹತ್ತು ಹಲವು ರೂಪ ತಳೆಯುತ್ತದೆ! ಎಕ್ಸ್ ಟ್ರಾ ಆಕ್ಸಿಜನ್, ಮಿನರಲ್, ವಿಟಮಿನ್ ಎಂಬ ಸುಳ್ಳುಗಳು ಅದರಲ್ಲಿ ಸೇರುತ್ತವೆ! ‘ಸಾರ್, ಬರೇ ನೀರಾ, ಮಿನರಲ್ ವಾಟರಾ’ ಎಂಬ ಮಾಣಿಯೆದುರು ಪ್ರತಿಷ್ಠೆ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯುಂಟಾಗುತ್ತದೆ! ಆಧುನಿಕ ಜೀವನಶೈಲಿಗೆ ನೀರಿನ ಕೋಡು!

ಈ ಬಾಟಲು ನೀರು ಅತಿ ಶುದ್ಧವೇ? ಅದೂ ಖಂಡಿತವಿಲ್ಲ. ಈ ಬಾಟಲುಗಳಲ್ಲಿರುವ ನೀರು ಬೇರೊಂದು ಲೋಕದಿಂದಲೋ, ಅತಿ ವಿಶೇಷ ಮೂಲದಿಂದಲೋ ಬಂದದ್ದಲ್ಲ. ಸಾಮಾನ್ಯವಾಗಿ ದೊರೆಯುವ ಭೂಜಲವನ್ನೇ ಶುದ್ಧೀಕರಿಸಿ ಈ ಬಾಟಲುಗಳಲ್ಲಿ ತುಂಬಲಾಗುತ್ತದೆ. ಭೂಜಲವನ್ನು ಶುದ್ಧೀಕರಿಸುವುದು ದುಬಾರಿಯೆನಿಸುವೆಡೆಗಳಲ್ಲಿ ನಳ್ಳಿ ನೀರನ್ನೇ ಬಳಸಲಾಗುತ್ತದೆ. ಒಂದು ಬಾಟಲು ತುಂಬಲು ಮೂರು ಬಾಟಲಿನಷ್ಟು ನೀರು ಪೋಲಾಗುತ್ತದೆ. ಗುಟುಕು ನೀರಿಗೆ ಬಾಯಿ ಬಿಡುವಲ್ಲಿ ಈ ಡೌಲು! ಈ ಬಾಟಲು ನೀರು ಕುದಿಸಿ ತಣಿಸಿದ ನೀರಿಗಿಂತ ಶ್ರೇಷ್ಠವೂ ಅಲ್ಲ. ಒಮ್ಮೆ ಈ ಬಾಟಲನ್ನು ತೆರೆದರೆ ಕುಡಿದು ಮುಗಿಸಲೇಬೇಕು, ಹಾಗೇ ಬಿಟ್ಟರೆ ಸೂಕ್ಷ್ಮಾಣುಗಳು ಸೇರಿಕೊಳ್ಳುವ ಸಾಧ್ಯತೆಗಳಿರುತ್ತವೆ. ನಕಲಿಗಳ ಕಾಟ ಬೇರೆ. ಬಾಟಲು ಚಂದವೆಂದು ಮರುಬಳಕೆ ಮಾಡುವುದೂ ಸುರಕ್ಷಿತವಲ್ಲ. ಹಾಗೆಂದು ಎಸೆದರೆ ಅವುಗಳಿಂದ ಪರಿಸರಕ್ಕೂ ಕೇಡು. ಒಟ್ಟಿನಲ್ಲಿ ಬಾಟಲು ನೀರನ್ನು ಮಾರುವವನನ್ನುಳಿದು ಇನ್ನೆಲ್ಲರಿಗೆ ನಷ್ಟವೇ.

ನೀರನ್ನು ಶುದ್ಧೀಕರಿಸುವುದಕ್ಕೆ ಬಗೆಬಗೆಯ ಸೋಸುಕಗಳು, ಅತಿನೇರಳೆ ಕಿರಣಗಳ ಸಾಧನಗಳು, ವಿಪರ್ಯಯ ಪರಾಸರಣ (ಆರ್ ಒ) ಸಾಧನಗಳು ಮುಂತಾದವು ಸಾವಿರಗಟ್ಟಲೆ ಬೆಲೆಗೆ ಭರದಿಂದ ಬಿಕರಿಯಾಗುತ್ತಿವೆ. ಆದರೆ ಇವುಗಳಲ್ಲಿ ನೀರು ಸಂಪೂರ್ಣವಾಗಿ ಶುದ್ಧವಾಗುತ್ತದೆಯೇ ಎನ್ನುವುದು ಯಕ್ಷಪ್ರಶ್ನೆಯೇ. ಪುಣೆಯ ರಾಷ್ಟ್ರೀಯ ವೈರಾಣು ಅಧ್ಯಯನ ಸಂಸ್ಥೆಯ ವರದಿಯಂತೆ, ಟೊಳ್ಳು ತಂತುಗಳ ಪೊರೆ (ಹಾಲೊ ಫೈಬರ್ ಮೆಂಬ್ರೇನ್) ಅಥವಾ ಸೂಕ್ಷ್ಮ ತಂತುಗಳ ಸೋಸುಕಗಳನ್ನುಳ್ಳ ಸಾಧನಗಳು ಮಾತ್ರವೇ ನೀರಿನಲ್ಲಿರುವ ವೈರಾಣುಗಳನ್ನೂ, ಇನ್ನಿತರ ರೋಗಕಾರಕಗಳನ್ನೂ ತಡೆಯುತ್ತವೆ. ಅತಿ ನೇರಳೆ ಕಿರಣಗಳಿಂದ ಶುದ್ಧೀಕರಿಸುವ ಸಾಧನಗಳು ಕೆಲವು ಬ್ಯಾಕ್ಟೀರಿಯಾಗಳನ್ನು ತಾತ್ಕಾಲಿಕವಾಗಿ ತಡೆಯುತ್ತವೆಯಾದರೂ, ಇತರ ಸೂಕ್ಷ್ಮಾಣುಗಳನ್ನು ನಿವಾರಿಸುವುದಿಲ್ಲ. ವಿಪರ್ಯಯ ಪರಾಸರಣ (ಆರ್ ಒ) ಸಾಧನಗಳಲ್ಲೂ ಎಲ್ಲಾ ರಾಸಾಯನಿಕಗಳು ಹಾಗೂ ಸೂಕ್ಷ್ಮಾಣುಗಳು ಪ್ರತ್ಯೇಕಿಸಲ್ಪಡುವುದಿಲ್ಲ. ಇಂತಹಾ ದುಬಾರಿ ಸಾಧನಗಳ ಬದಲಿಗೆ, ನೀರನ್ನು ಶುದ್ಧವಾದ ಬಟ್ಟೆಯಲ್ಲಿ ಅಥವಾ ಒಳ್ಳೆಯ ಸೋಸುಕದಲ್ಲಿ ಸೋಸಿ, ಒಂದು ನಿಮಿಷ ಕುದಿಸಿ ತಣಿಸುವುದರಿಂದ ಅತಿ ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಶುದ್ಧೀಕರಿಸಬಹುದು. ಚಾರಣ ಯಾ ಇನ್ನಿತರ ಹೊರ ಪ್ರಯಾಣಗಳ ಸಂದರ್ಭದಲ್ಲಿ ಸೋಸಿದ ಲೀಟರ್ ನೀರಿಗೆ 5 ಬಿಂದು ಅಯೊಡಿನ್ ಟಿಂಕ್ಚರ್ ಬೆರೆಸಿ ಅರ್ಧ ಗಂಟೆಯ ಬಳಿಕ ಬಳಸಬಹುದು. ಆಡಳಿತದ ನೆರವಿನಿಂದ ಕುಡಿಯುವ ನೀರಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಮಾಲಿನ್ಯವನ್ನು ಕಾಲಕಾಲಕ್ಕೆ ಪರೀಕ್ಷಿಸಬಹುದು.

ಲೋಕಾಂತ್ಯವಾಗಬೇಕಾಗಿದ್ದ ಜಲಪ್ರಳಯವು ಹುಸಿಗುಲ್ಲಾಗಿತ್ತು; ಆದರೆ ಬಿಗಡಾಯಿಸುತ್ತಿರುವ ಜಲಕ್ಷಾಮವು ಕಟು ಸತ್ಯವಾಗಿದೆ. ಹೊರಗಿರುವ ನೀರು ಬತ್ತಿ ಹೋದರೆ ದೇಹದೊಳಗಿರುವ ನೀರೂ ಉಳಿಯಲಾರದು. ಆದ್ದರಿಂದಲೇ, ಜಲಸಂಪನ್ಮೂಲಗಳ ಪುನಶ್ಚೇತನಕ್ಕೂ, ಅವುಗಳ ಸ್ವಚ್ಛತೆಯನ್ನು ಕಾಯುವುದಕ್ಕೂ ಪ್ರತಿಯೋರ್ವರೂ ಕಂಕಣಬದ್ಧರಾಗಬೇಕು. ಶುದ್ಧ ನೀರನ್ನು ಪಡೆಯುವುದು ನಮ್ಮೆಲ್ಲರ ಪ್ರಕೃತಿದತ್ತವಾದ, ಸಂವಿಧಾನದತ್ತವಾದ ಹಕ್ಕಾಗಿದೆ. ಸಂಪೂರ್ಣ ಸ್ವಚ್ಛತೆಗಾಗಿ ನಿರ್ಮಲ ಭಾರತ ಅಭಿಯಾನ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮ ಹಾಗೂ ನಗರಾಡಳಿತಗಳ ಉಸ್ತುವಾರಿಯಲ್ಲಿರುವ ಕುಡಿಯುವ ನೀರಿನ ಯೋಜನೆಗಳೆಲ್ಲವೂ ಫಲಪ್ರದವಾಗಬೇಕಾದರೆ, ಅವುಗಳಿಗಾಗಿ ವ್ಯಯಿಸುತ್ತಿರುವ ಕೋಟಿಗಟ್ಟಲೆ ಹಣವು ಸದ್ಬಳಕೆಯಾಗಬೇಕಾದರೆ, ಆಡಳಿತದ ಮೇಲೆ ಜನರ ಒತ್ತಡವು ಬಿಗಿಯಾಗಬೇಕು. ಹಾಗಾದಾಗ ಮಾರ್ಚ್ 22ರ ವಿಶ್ವ ಜಲ ದಿನಾಚರಣೆ ಸಾರ್ಥಕವಾದೀತು.